ಶಂಕರಪುರ ಮಲ್ಲಿಗೆ ದರ ಏರಿಕೆ: ಈಗ ಒಂದು ಅಟ್ಟೆಗೆ 820 ರೂ.!
Team Udayavani, Jun 25, 2018, 6:00 AM IST
ಶಿರ್ವ: ಜೂನ್ ಮೊದಲ ವಾರದಲ್ಲಿ ಪಾತಾಳಕ್ಕೆ ಕುಸಿದಿದ್ದ ಶಂಕರಪುರ ಮಲ್ಲಿಗೆ ಬೆಳೆ ಮೂರನೇ ವಾರದಲ್ಲಿ ಗಗನಕ್ಕೇರಿದೆ. ಜೂ. 24ರಂದು ಅಟ್ಟೆಗೆ 820 ರೂ. ಆಗಿದೆ.
ಅಧಿಕ ಮಾಸ ಮುಗಿದು ಮದುವೆ ಸಹಿತ ಶುಭ ಸಮಾರಂಭಗಳು ಪ್ರಾರಂಭಗೊಂಡಿದ್ದು ಮಲ್ಲಿಗೆಗೆ ಬೇಡಿಕೆ ಕುದುರಲು ಕಾರಣವಾಗಿದೆ. ಮಲ್ಲಿಗೆಯ ದರದ ಏರುಗತಿಯಿಂದಾಗಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಇದರೊಂದಿಗೆ ನಿರಂತರ ಸುರಿವ ಮಳೆಯಿಂದಾಗಿ ಹೂವಿನ ಮೊಗ್ಗು ಹಾಳಾಗುತ್ತಿದ್ದು ಬೆಳೆ ಕಡಿಮೆಯಾಗಿದೆ. ಬೆಳೆ ಕಡಿಮೆಯಾಗಿ ಕಟ್ಟೆಗೆ ಬರುವ ಹೂವಿನ ಪ್ರಮಾಣವೂ ಕಡಿಮೆಯಾಗಿದೆ.
ಮಲ್ಲಿಗೆಯ ಜತೆ ಜಾಜಿಯ ಬೆಲೆಯೂ ಏರಿದ್ದು ರವಿವಾರ ಅಟ್ಟಿಗೆ ರೂ. 420 ಆಗಿದೆ. ಆಟಿ ತಿಂಗಳಲ್ಲಿ ಶುಭ ಸಮಾರಂಭಗಳು ಕಡಿಮೆಯಾಗಲಿದ್ದು, ಈ ಸಂದರ್ಭ ಬೆಳೆ ಇಳಿಯುವ ನಿರೀಕ್ಷೆ ಗ್ರಾಹಕರಿಗೆ ಇದೆ.