ಕಟಪಾಡಿ: ಸೇತುವೆ ಕಾಮಗಾರಿ ಸ್ಥಳದಲ್ಲಿ ಸುರಕ್ಷತಾ ಕ್ರಮ ಹೆಚ್ಚಳ
Team Udayavani, Mar 16, 2019, 12:30 AM IST
ಕಟಪಾಡಿ: ಅಭಿವೃದ್ಧಿ ಕಾಮಗಾರಿಗಾಗಿ ಕಟಪಾಡಿ ಹಳೆ ಎಂಬಿಸಿ ರಸ್ತೆಯಲ್ಲಿನ ನಿತ್ಯಾನಂದ ಸಭಾಭವನದ ಬಳಿಯಲ್ಲಿ ಇದ್ದ ಹಳೆಯದಾದ ಸೇತುವೆಯೊಂದನ್ನು ಕೆಡವಿ ಹೊಸ ಸೇತುವೆ ನಿರ್ಮಾಣದ ಕಾಮಗಾರಿಯ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಿ ಸುರಕ್ಷತಾ ಕ್ರಮ ಹೆಚ್ಚಳಗೊಂಡಿದೆ.
ಈ ಭಾಗದಲ್ಲಿ ಸೂಕ್ತವಾದ ಮತ್ತು ಸಮರ್ಪಕವಾದ ಸುರಕ್ಷತಾ ಕ್ರಮಗಳಿಲ್ಲದೆ ಸಂಚಾರಿಗಳು ಗೊಂದಲಕ್ಕೀಡಾಗುತ್ತಿದ್ದರು. ಅಪಾಯದ ಭೀತಿಯ ಬಗ್ಗೆ ಸಾರ್ವಜನಿಕರು ಅಸಹನೆ ವ್ಯಕ್ತಪಡಿಸುತ್ತಿದ್ದರು.
ಬುಧವಾರ ರಾತ್ರಿಯಲ್ಲಿ ಸವಾರನೋರ್ವ ಬಿದ್ದು ಗಾಯಗೊಂಡಿದ್ದು ಇದೀಗ ಹೆಚ್ಚಿನ ಸುರಕ್ಷತೆಗೆ ಗಮನ ಹರಿಸಿದ್ದು, ಮಂಗಳೂರು ಭಾಗದಿಂದ ರಾಷ್ಟ್ರೀಯ ಹೆದ್ದಾರಿಯಿಂದ ನೇರವಾಗಿ ಕಲ್ಲಾಪು ಬಳಿ ಒಳ ಪ್ರವೇಶಿಸುವಲ್ಲಿಯೂ ಬ್ಯಾರಿಕೇಡ್, ಟೇಪ್ ಅಳವಡಿಸಿದ್ದು,
ಕಟಪಾಡಿ ಒಳ ಭಾಗದಿಂದ ಸಂಚರಿಸುವ ಭಾಗದಲ್ಲಿಯೂ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ