“ಕುಣಿಸಿ ತಕಥೈ’ ಹಾಡಿದ್ರು ಸಿಂಬು: ಬೊಂಬಾಟ್ ಪ್ರೋಮೋ ಸಾಂಗ್ ವೀಕ್ಷಿಸಿ
Team Udayavani, May 22, 2018, 4:48 PM IST
ತಮಿಳು ನಟ ಸಿಂಬು ಇತ್ತೀಚೆಗೆ “ಇರುವುದೆಲ್ಲವ ಬಿಟ್ಟು’ ಚಿತ್ರದ ಹಾಡಿಗೆ ಧ್ವನಿಯಾಗಿದ್ದಾರೆ. ಅಲ್ಲದೇ ಆ ಹಾಡಿಗೆ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗೀತ ರಚನೆಕಾರ ವಿ.ನಾಗೇಂದ್ರ ಪ್ರಸಾದ್ ಬರೆದ “ಊರ ಸುದ್ದಿ ಕೇಳ್ತಾ ಇರುವೆ, ಎಲ್ಲರಿಗೂ ಹೇಳ್ತಾ ಇರುವೆ, ನಿಂದು ಸ್ವಲ್ಪ ಸೇರ್ಸುತ್ತಿರುವೆ, ಯಾಕೆ ಬಿಟ್ಟುಕೊಳ್ತೀ ಇರುವೆ…’ ಎಂಬ ಹಾಡಿಗೆ ಸಿಂಬು ಧ್ವನಿಯಾಗಿದ್ದಾರೆ. ಈ ಹಾಡು ತುಂಬಾ ಸ್ಪೀಡ್ ಇದ್ದುದರಿಂದ, ಮೊದಲು ಹಾಡನ್ನು ಅಭ್ಯಾಸ ಮಾಡಿಕೊಂಡು ಆ ಬಳಿಕ ಸ್ಪಷ್ಟ ಕನ್ನಡದಲ್ಲಿ ಸಿಂಬು ಹಾಡಿದ್ದಾರೆ ಎಂದು ನಿರ್ದೇಶಕ ಕಾಂತರಾಜ್ ಕನ್ನಲ್ಲಿ ಹೇಳಿದ್ದಾರೆ. ಈ ಹಿಂದೆ ತೆಲುಗು, ತಮಿಳು ಚಿತ್ರಗಳಿಗೆ ಹಾಡಿರುವ ಸಿಂಬು, ಇದೇ ಮೊದಲ ಸಲ ಕನ್ನಡದ ಚಿತ್ರಕ್ಕೆ ಹಾಡಿದ್ದಾರೆ. ಹಾಡಿದ ನಂತರ, ಏನಾದರೂ ಕನ್ನಡ ಪದ ತಪ್ಪಿದ್ದರೆ ದಯವಿಟ್ಟು ತಿಳಿಸಿ, ಪುನಃ ಸ್ಪಷ್ಟವಾಗಿ ಹಾಡುವೆ ಎಂದು ಹೇಳುವ ಮೂಲಕ ಕನ್ನಡ ಭಾಷೆ ಕುರಿತು ಪ್ರೀತಿ ತೋರಿದ್ದಾಗಿ ಹೇಳುತ್ತಾರೆ ನಿರ್ದೇಶಕರು. ಚಿತ್ರಕ್ಕೆ ಶ್ರೀಧರ್ ವಿ.ಸಂಭ್ರಮ್ ಸಂಗೀತವಿದೆ. ಅಲ್ಲದೇ ವಿಲಿಯಮ್ ಡೇವಿಡ್ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ. ಇನ್ನು ದೇವರಾಜ್ ದಾವಣಗೆರೆ ಚಿತ್ರದ ನಿರ್ಮಾಪಕರು. ಚಿತ್ರದ ಬೊಂಬಾಟ್ ಪ್ರೋಮೋ ಸಾಂಗ್ ವೀಕ್ಷಿಸಿ.