Lok Sabha Election: ಗುಜರಾತ್ನ 2 ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗಳು ಕಣದಿಂದ ಹಿಂದಕ್ಕೆ!
Team Udayavani, Mar 24, 2024, 9:04 AM IST
ಅಹ್ಮದಾಬಾದ್: ಗುಜರಾತ್ನ ವಡೋ ದರಾ ಮತ್ತು ಸಬರಕಾಂತ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದಿದ್ದ 2 ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿರುವುದಾಗಿ ಶನಿವಾರ ಘೋಷಿಸಿದ್ದಾರೆ.
ವಡೋದರಾದ ಸಂಸದೆ ರಂಜನ್ಬೆನ್ ಧನಂಜಯ್ ಭಟ್ ಮತ್ತು ಸಬರಕಾಂತ ಬಿಜೆಪಿ ಅಭ್ಯರ್ಥಿ ಭಿಖಾಜಿ ಠಾಕೂರ್ ವೈಯಕ್ತಿಕ ಕಾರಣಗಳಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. 2014ರ ಚುನಾವಣೆಯಲ್ಲಿ ವಾರಾಣಸಿ ಜತೆಗೆ ವಡೋದರಾ ಕ್ಷೇತ್ರಗಳಲ್ಲಿ ಮೋದಿ ಸ್ಪರ್ಧಿಸಿ ಜಯ ಗಳಿಸಿದ್ದರು. ಅನಂತರ ವಾರಾಣಸಿ ಕ್ಷೇತ್ರ ಉಳಿಸಿಕೊಂಡು, ವಡೋದರಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ನಡೆದ ಉಪ ಚುನಾವಣೆಯಲ್ಲಿ ವಡೋದರಾದಿಂದ ರಂಜನ್ ಭಟ್ ಗೆದ್ದಿದ್ದರು. 2019ರಲ್ಲೂ ಅವರೇ ಜಯಶಾಲಿಯಾಗಿದ್ದರು. ಈ ಬಾರಿ ಅವರಿಗೆ ಬಿಜೆಪಿ ಮತ್ತೂಮ್ಮೆ ಟಿಕೆಟ್ ನೀಡಿದ್ದು, ಅದನ್ನು ಸ್ಥಳೀಯ ನಾಯಕರು ವಿರೋಧಿಸಿ, ಕೆಲವು ದಿನಗಳ ಹಿಂದೆ ಕ್ಷೇತ್ರದಲ್ಲಿ ಬ್ಯಾನರ್ಗಳು ಹರಿದಾಡಿದ್ದವು. ಪಕ್ಷದ ಆಂತರಿಕ ಭಿನ್ನಮತದ ಕಾರಣ ರಂಜನ್ ಮತ್ತು ಭಿಖಾಜಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!
Madhya Pradesh; ರಾಹುಲ್ ಗಾಂಧಿ ಭೇಟಿ ನಡುವೆ, ಬಿಜೆಪಿ ಸೇರಿದ ಕಾಂಗ್ರೆಸ್ ಶಾಸಕ!