Modi ಎಲ್ಲರಂತಲ್ಲ, ಕೊಟ್ಟ ಭರವಸೆ ಈಡೇರಿಸಿಯೇ ತೀರುತ್ತೇನೆ
ರಾಜಕೀಯಕ್ಕಾಗಿ ನಾವು ಯೋಜನೆ ಜಾರಿ ಮಾಡಿಲ್ಲ
Team Udayavani, Mar 11, 2024, 12:50 AM IST
ಲಕ್ನೋ: ಉತ್ತರ ಪ್ರದೇಶ ಒಂದು ಕಾಲ ದಲ್ಲಿ ಮಾಫಿಯಾ ರಾಜ್ ಅನ್ನು ಕಂಡಿತ್ತು ಆದರೀಗ ಕಾನೂನು ಆಳ್ವಿಕೆ ನೋಡುತ್ತಿದೆ. ಬೇರೆ ಪಕ್ಷಗಳ ನಾಯಕರು ಚುನಾವಣೆ ವೇಳೆ ಭರವಸೆ ನೀಡಿ, ಅನಂತರ ಕಣ್ಮರೆ ಯಾಗಿ ಬಿಡುತ್ತಿದ್ದರು. ಆದರೆ ಮೋದಿ ಹಾಗಲ್ಲ! ನಾನು ಎಲ್ಲರಂತಲ್ಲ (ದೂಸ್ರಿ ಮಿಟ್ಟಿ ಕಾ ಇನ್ಸಾನ್ ಹೈ). 2019ರಲ್ಲಿ ಕೇವಲ ರಾಜಕೀಯಕ್ಕಾಗಿ ನಾವು ಯೋಜನೆಗಳಿಗೆ ಅಡಿಪಾಯ ಹಾಕಿಲ್ಲ, ಅವುಗಳನ್ನು ಪೂರೈಸಿದ್ದೇವೆ ಎಂದಿದ್ದಾರೆ.
ವಿಪಕ್ಷಗಳಿಗೆ ಚಾಟಿ: “ಪರಿವಾರವಾದಿಗಳು ಮೋದಿಗೆ ಕುಟುಂಬವೇ ಇಲ್ಲ ಎಂದು ಟೀಕಿ ಸುತ್ತಾರೆ. ಆದರೆ ಈ ದೇಶದ 140 ಕೋಟಿ ಜನರೇ ಮೋದಿಯ ಪರಿವಾರ ಎಂಬುದನ್ನು ಅವರು ಮರೆತಿ ದ್ದಾರೆ’ ಎಂದು ಅವರು ವಿಪಕ್ಷಗಳ ವಿರುದ್ಧ ಚಾಟಿ ಬೀಸಿದ್ದಾರೆ.
ರವಿವಾರ ಉತ್ತರ ಪ್ರದೇಶದಲ್ಲಿ ಬಹುಕೋಟಿ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ವಿಪಕ್ಷಗಳ ವಿರುದ್ಧ ವಾಗ್ಧಾಳಿ ನಡೆಸಿದರು. ಜಾತೀಯತೆ, ಪರಿವಾರವಾದ, ಓಟ್ ಬ್ಯಾಂಕ್ಗಳನ್ನೇ ಆಧರಿಸಿರುವ ಇಂಡಿಯಾ ಒಕ್ಕೂಟ ಇಂದು ನಿದ್ದೆಗೆಡುವಂತಾಗಿದೆ. ನೀವು ನಮಗೆ ತೋರು ತ್ತಿರುವ ಪ್ರೀತಿಯೇ ಅದಕ್ಕೆ ಕಾರಣ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ