ಸದಾ ಕಾಡುವ ಅಮ್ಮನ ಹುಟ್ಟು ಹಬ್ಬದ ನೆನಪು..!

ಅಮ್ಮನಿಗೆ ತಿಳಿಯದೆ ಆ ಹುಂಡಿಯನ್ನು ಒಡೆದು ಎಣಿಸಿದಾಗ ಅದರಲ್ಲಿ 320 ರೂ.ಗಳು ಇತ್ತು.

Team Udayavani, May 10, 2020, 10:04 AM IST

ಸದಾ ಕಾಡುವ ಅಮ್ಮನ ಹುಟ್ಟು ಹಬ್ಬದ ನೆನಪು

Representative Image

ಇದು ಸುಮಾರು ಏಳೆಂಟು ವರ್ಷಗಳ ಮಾತು. ಆಗ ಬಹುಶಃ ನಾನು ಆರನೇ ತರಗತಿ ಓದುತ್ತಿದ್ದಿರಬಹುದು. ಒಂದು ದಿನ ಶಾಲೆಯಿಂದ ಬೇಗ ಬಂದಿದ್ದೆ. ಅಂದು ಅಮ್ಮನೊಡನೆ ಯಾವುದೋ ವಿಚಾರಕ್ಕಾಗಿ ಕಾಲ್ಕಿತ್ತು ಜಗಳಕ್ಕೆ ನಿಂತಿದ್ದೆ. ಅಮ್ಮ ಆಗ ನನ್ನನ್ನೇ ದಿಟ್ಟಿಸಿ ನೋಡುತ್ತಾ ನಕ್ಕಿತು. ನಾನು ಆಗ ಕೋಪದಿಂದ “ನಾನಿಲ್ಲಿ ಬಡ್ಕೊಳ್ತಾ ಇದೀನಿ, ನೀನು ನಗ್ತಾ ಇದೀಯಾ” ಅಂತ ಹೇಳಿದೆ.

ಆಗ ಅವಳು “ಇಲ್ಲ ಗುಂಡ ನೀನು ಸಣ್ಣ ಪಾಪು ಆಗಿದ್ದಾಗ ಹೇಗೆ ತುಂಟನಿದ್ದೋ ಹಾಗೆಯೇ ಇವಾಗಲೂ ತುಂಟಾನಾಗಿಯೇ ಇದ್ದೀಯಾ, ಸ್ವಲ್ಪನೂ ಬದಲಾವಣೆಯಾಗಿಲ್ಲ ಎಂದಳು. ಅವಳು ನನ್ನ ಬಾಲ್ಯವನ್ನು ಮೆಲಕು ಹಾಕಿದ್ದೆ ತಡ… ಆಗ ನಾನು “ಅಮ್ಮ ನನ್ನ ಬಾಲ್ಯದ ಫೋಟೋ ತೋರಿಸು ಅಂದೆ…” ಆಗ ಅವಳು ಎಲ್ಲೋ ಬೀರುವಿನ ಖಜಾನೆಯಲ್ಲಿ ಇಟ್ಟಿದೀನಿ ನೋಡಪ್ಪ ಅಂತ ಹೇಳಿದ್ದೆ ತಡ, ಬಹಳ ಉತ್ಸಾಹದಿಂದ ಬೀರುವಿನ ಖಜಾನೆಗೆ ಕೈ ಹಾಕಿ ಫೋಟೋ ಹುಡುಕುವ ಕೆಲಸ ಶುರು ಮಾಡಿದೆ… ಆ ಬೀರುವಿನ ಖಜಾನೆಯಲ್ಲಿ ಮುಖ್ಯ ಚೀಟಿಗಳು , ಪತ್ರಗಳು ಎಲ್ಲವೂ ಇದ್ದವು.

ಹಾಗೇಯೇ ಹುಡುಕುತ್ತಿದ್ದಾಗ ಅಮ್ಮನ ಹತ್ತನೇ ತರಗತಿ ಅಂಕಪಟ್ಟಿ ಸಿಕ್ಕಿತು. ಅಮ್ಮ 10 ನೇ ತರಗತಿಯಲ್ಲಿದ್ದಾಗ ತೆಗೆದಿದ್ದ ಅಂಕ ನೋಡುತ್ತಾ… ಹಾಗೆ ಗಮನಿಸುವಾಗ ಅವಳ ಹುಟ್ಟಿದ ಹಬ್ಬಕ್ಕೆ ಇನ್ನೊಂದು ದಿನ ಮಾತ್ರವೇ ಬಾಕಿ ಇತ್ತು ಎಂದು ತಿಳಿದೆ. ಅಮ್ಮನ ಹುಟ್ಟು ಹಬ್ಬಕ್ಕೆ ಏನಾದರೂ ಉಡುಗೊರೆ ಕೊಡಲೇ ಬೇಕೆಂದು ಯೋಚಿಸಿದೆ.

ಆಗ ತಲೆಗೆ ನನ್ನ ಹುಂಡಿಯ ನೆನಪಾಯ್ತು. ನಾನು ಪ್ರತೀ ದಿನ ಶಾಲೆಗೆ ಹೋಗುವಾಗ ಅಪ್ಪ ಕೊಡುತ್ತಿದ್ದ ಚಿಲ್ಲರೆ ಕಾಸನ್ನು ಸುಖಾ-ಸುಮ್ಮನೇ ಖರ್ಚು ಮಾಡುತ್ತಿರಲಿಲ್ಲ. ಆ ಹಣವನ್ನು ಹುಂಡಿಯೊಳಗೆ ಹಾಕುತ್ತಿದ್ದೆ. ಅಮ್ಮನಿಗೆ ತಿಳಿಯದೆ ಆ ಹುಂಡಿಯನ್ನು ಒಡೆದು ಎಣಿಸಿದಾಗ ಅದರಲ್ಲಿ 320 ರೂ.ಗಳು ಇತ್ತು. ಆ ದಿನ ಬೆಳಗ್ಗೆ ಪಟ್ಟಣಕ್ಕೆ ಹೋಗಿ ಅಮ್ಮನಿಗಾಗಿಯೆ ಅವಳಿಷ್ಟದ ಹಸಿರು ಬಣ್ಣದ ಸೀರೆಯನ್ನು ತೆಗೆದುಕೊಂಡು ಅದರ ಜೊತೆ ಒಂದಿಪ್ಪತ್ತು ರೂಪಾಯಿ ಕೊಟ್ಟು ಕೆಂಪು ಬಣ್ಣದ ಗಾಜಿನ ಬಳೆಗಳನ್ನು ತಗಂಡು ಮನೆಗೆ ಬಂದೆ.

ನಾನು ಮನೆಗೆ ಬರುವಷ್ಟರಲ್ಲಿ ಸಂಜೆಯಾಗಿತ್ತು, ಮನೆಗೆ ಹೋಗಿದ್ದ ತಕ್ಷಣವೇ ಅವಳಿಗಿಷ್ಟವಾದ ಹಸಿರು ಬಣ್ಣದ ಸೀರೆಯನ್ನು, ಕೆಂಪು ಬಣ್ಣದ ಬಳೆಗಳನ್ನು ಕೊಟ್ಟು, ಹುಟ್ಟು ಹಬ್ಬದ ಶುಭಾಶಯ ಅಮ್ಮಾ… ಎಂದು ಬಹಳ ಖುಷಿಯಿಂದ ಹೇಳಿದ್ದೇ.. ತಡ ಅವಳು ನನ್ನನ್ನು ಬಿಗಿಯಾಗಿ ತಬ್ಬಿಕೊಂಡು ಏನು ಮಾತಾನಾಡದೇ ಕೆನ್ನೆಗೆ ಮುತ್ತಿಟ್ಟಳು. ಆ ಕ್ಷಣದ ಉಲ್ಲಾಸಕ್ಕೆ ಇಬ್ಬರ ಕಣ್ಣಾಲಿಗಳು ಜಿನುಗಿದವು. ಅವಳು ಇಂದಿಗೂ ಆ ಸೀರೆಯನ್ನು ಭದ್ರವಾಗಿ, ಸುರಕ್ಷಿತವಾಗಿ ಎತ್ತಿಟ್ಟಿದ್ದಾಳೆ. ಆ ಸೀರೆಯನ್ನು ಈಗಲೂ ನೋಡಿದರು ಸಹ ಆ ನೆನಪು ಕಾಡಿ, ಕಣ್ಣಂಚು ತೇವವಾಗುತ್ತಿವೆ.

ರವಿತೇಜ ಚಿಗಳಿಕಟ್ಟೆ
ಪತ್ರಿಕೋದ್ಯಮ ವಿದ್ಯಾರ್ಥಿ, ತುಮಕೂರು

ಟಾಪ್ ನ್ಯೂಸ್

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಗು ಹುಟ್ಟಿದಾಗ ಕಣ್ಣು ಕಲ್ಪನೆಗೆ ಬಂದಾಗ ಮೊದಲು ಕಾಣುವ ಮುಖವೇ ಅಮ್ಮನದ್ದು

ಮಗು ಹುಟ್ಟಿದಾಗ ಕಣ್ಣು ಕಲ್ಪನೆಗೆ ಬಂದಾಗ ಮೊದಲು ಕಾಣುವ ಮುಖವೇ ಅಮ್ಮನದ್ದು

‘ಮಾತೃದೇವೋಭವ’: ಅಮ್ಮನ ಬಗ್ಗೆ ಹೇಳಲು ಪದಗಳೇ ಸಾಲದು…. ಅವಳಿಗೆ ಅವಳೇ ಸಾಟಿ….

‘ಮಾತೃದೇವೋಭವ’: ಅಮ್ಮನ ಬಗ್ಗೆ ಹೇಳಲು ಪದಗಳೇ ಸಾಲದು…. ಅವಳಿಗೆ ಅವಳೇ ಸಾಟಿ….

ನೋವಲ್ಲಿ ಶೋಕ ಸಾಗರವೇ ಬಂದರು ದಾರಿ ಸವೆಸಿ ಕಂದನ ಬರಸೆಳೆದಪ್ಪುವಳು

ನೋವಲ್ಲಿ ಶೋಕ ಸಾಗರವೇ ಬಂದರು ದಾರಿ ಸವೆಸಿ ಕಂದನ ಬರಸೆಳೆದಪ್ಪುವಳು

Mother-09

ನಾನು ಅಮ್ಮನ ಕನಸಿನಲ್ಲಿ ಎಚ್ಚರವಾಗಿರುತ್ತೇನೆ, ಅವಳು ನನ್ನ ಕನಸಿನಲ್ಲಿ ಎಚ್ಚರವಾಗಿರುತ್ತಾಳೆ

Mother-08

ನವಮಾಸ ನಮ್ಮನ್ನು ಹೊತ್ತು, ಹೆರುವ ಆಕೆಗೆ ಕೇವಲ ಒಂದು ದಿನ ಇತ್ತರೆ ಸಾಕೇ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

anna 2

Hate speech: ಅಣ್ಣಾಮಲೈ ವಿಚಾರಣೆಗೆ ತಡೆ ವಿಸ್ತರಣೆ

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

UGC

UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.