ಕಾಳಧನಿಕರೇ, ಮಾ.31ರೊಳಗೆ ಶುದ್ಧಹಸ್ತರಾಗಿ; ಕಾದಿದೆ ಶೇ.137 ತೆರಿಗೆ
Team Udayavani, Mar 24, 2017, 12:28 PM IST
ಹೊಸದಿಲ್ಲಿ : “ನಿಮ್ಮ ಅಕ್ರಮ ಠೇವಣಿ, ಆಸ್ತಿಪಾಸ್ತಿಗಳ ಬಗ್ಗೆ ನಮಗೆ ಎಲ್ಲ ಮಾಹಿತಿ ಇದೆ. ಮಾರ್ಚ್ 31ರಂದು ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಮುಗಿಯಲಿದೆ. ಅದಕ್ಕೆ ಮೊದಲು ಈ ಯೋಜನೆಯ ಲಾಭ ಪಡೆದು ನೀವು ಶುದ್ಧ ಹಸ್ತರಾಗಬೇಕಾಗಿದೆ’ ಎಂದು ಆದಾಯ ತೆರಿಗೆ ಇಲಾಖೆ ಕಪ್ಪುಹಣ ಹೊಂದಿರುವವರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದೆ.
ಕಪ್ಪು ಹಣ ಘೋಷಿಸಕೊಳ್ಳುವುದಕ್ಕೆ ಕೌಂಟ್ಡೌನ್ ಆರಂಭವಾಗಿದೆ. ಕಪ್ಪುಹಣ ಹೊಂದಿರುವವರು ಮಾರ್ಚ್ 31ರೊಳಗೆ ಪಿಎಂಜಿಕೆವೈ ಯೋಜನೆಯ ಲಾಭ ಪಡೆಯಲು ಈ ಕೂಡಲೇ ಮುಂದಾಗಬೇಕು; ಅನಂತರ ಪಶ್ಚಾತ್ತಾಪ ಪಟ್ಟು ಪ್ರಯೋಜನವಿಲ್ಲ ಎಂದು ಮನವರಿಕೆ ಮಾಡುವ ಜಾಹೀರುತುಗಳನ್ನು ಆದಾಯ ತೆರಿಗೆ ಇಲಾಖೆಯು ಪ್ರಮುಖ ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಪ್ರಕಟಿಸಿದೆ.
ಪಿಎಂಜಿಕೆವೈ ಯೋಜನೆಯಡಿ ತಮ್ಮ ಕಪ್ಪು ಹಣ ಮತ್ತು ಆಸ್ತಿಪಾಸ್ತಿಯನ್ನು ಘೋಷಿಸಿಕೊಳ್ಳುವವರ ಬಗ್ಗೆ ಸಂಪೂರ್ಣ ಗೌಪ್ಯತೆಯನ್ನು ಕಾಯ್ದುಕೊಳ್ಳಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಮಾರ್ಚ್ 31ರ ಬಳಿಕ ಕಪ್ಪುಹಣ, ಆಸ್ತಿ ಪಾಸ್ತಿ ಹೊಂದಿರುವವರ ಸಂಪೂರ್ಣ ವಿವರಗಳನ್ನು ಬೇನಾಮಿ ವ್ಯವಹಾರಗಳ ಕಾಯಿದೆಯ ಪ್ರಕಾರ ಜಾರಿ ನಿರ್ದೇಶನಾಲಯ, ಸಿಬಿಐ ಸಹಿತ ವಿವಿಧ ಕೇಂದ್ರ ತನಿಖಾ ದಳಗಳಿಗೆ ಒದಗಿಸಲಾಗುವುದು ಮತ್ತು ಅತ್ಯಂತ ಕಠಿನ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಸಿದೆ.
ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ (ಪಿಎಂಜಿಕೆವೈ) ಯೋಜನೆಯಡಿ ಕಾಳಧನಿಕರು ತಮ್ಮಲ್ಲಿನ ಕಪ್ಪು ಹಣದ ಮೇಲೆ ಶೇ.49.9 ತೆರಿಗೆ ಪಾವತಿಸಬೇಕಾಗುವುದು. ಇಲ್ಲದಿದ್ದಲ್ಲಿ ಅನಂತರದಲ್ಲಿ ಅವರು ತಮ್ಮ ಆದಾಯ ತೆರಿಗೆ ರಿಟರ್ನ್ ನಲ್ಲಿ ಶೇ.77.25ರ ದಂಡ ತೆರಿಗೆಯನ್ನು ಪಾವತಿಸಬೇಕಾಗುವುದು. ಒಂದು ವೇಳೆ ಅದನ್ನೂ ಮಾಡದೇ ಸಿಕ್ಕಿಬಿದ್ದಲ್ಲಿ ಅವರ ಮೇಲೆ ಶೇ.83.25ರ ತೆರಿಗೆಯನ್ನು ವಿಧಿಸಲಾಗುವುದು.
ಇವ್ಯಾವುದನ್ನೂ ಮಾಡದೇ ದಾಳಿಗೆ ಗುರಿಯಾಗುವವರು ಶೇ.107.25ರ ತೆರಿಗೆ ಮತ್ತು ದಂಡವನ್ನು ಎದುರಿಸಬೇಕಾಗುವುದು. ದಾಳಿಯ ವೇಳೆಯೂ ತಮ್ಮ ಅಕ್ರಮ ಕಪ್ಪು ಹಣ, ಆಸ್ತಿ ಪಾಸ್ತಿಯನ್ನು ಮುಚ್ಚಿಟ್ಟವರು ಶೇ.137.25ರ ತೆರಿಗೆ, ದಂಡವನ್ನು ಎದುರಿಸಬೇಕಾಗುವುದು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್