ತೆರಿಗೆಪಾವತಿದಾರನಿಗೆ ಇನ್ನೊಂದು ಪ್ರಹಾರ: ಇಳಿಯಲಿದೆ SB A/c.ಬಡ್ಡಿದರ
Team Udayavani, Feb 8, 2017, 11:29 AM IST
ಹೊಸದಿಲ್ಲಿ : ನೋಟು ನಿಷೇಧದ ಪರಿಣಾಮವಾಗಿ ಪ್ರಾಮಾಣಿಕ ತೆರಿಗೆಪಾವತಿದಾರರ ಮೇಲೆ ಇದೀಗ ಇನ್ನೊಂದು ಹೊಡೆತ ಬೀಳಲಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಜನರ ಉಳಿತಾಯ ಖಾತೆಯ ಮೇಲಿನ ಬಡ್ಡಿದರವನ್ನು ಇಳಿಸಲು ಸರಕಾರ ಉದ್ದೇಶಿಸಿದೆ. ನೋಟು ನಿಷೇಧದ ಬಳಿಕ ಬ್ಯಾಂಕುಗಳಿಗೆ ಕಡಿಮೆ ವೆಚ್ಚದ ಅಪಾರ ಪ್ರಮಾಣದ ಠೇವಣಿ ಹರಿದು ಬಂದಿರುವುದೇ ಇದಕ್ಕೆ ಕಾರಣವಾಗಿದೆ.
ಪ್ರಕೃತ ಭಾರತೀಯ ಬ್ಯಾಂಕುಗಳು ಜನರ ಉಳಿತಾಯ ಖಾತೆಗಳಲ್ಲಿನ ಹಣಕ್ಕೆ ಶೇ.4ರಿಂದ ಶೇ.6ರ ವರೆಗೆ ಬಡ್ಡಿ ನೀಡುತ್ತಿವೆ. ಬಹಳ ದೀರ್ಘಕಾಲದಿಂದ ಈ ಬಡ್ಡಿ ದರ ಚಾಲ್ತಿಯಲ್ಲಿದೆ.
ಆದರೆ ನೋಟು ನಿಷೇಧದ ಬಳಿಕ ಜನರು ಅಪಾರ ಪ್ರಮಾಣದಲ್ಲಿ ಬ್ಯಾಂಕ್ ಖಾತೆಗಳಿಗೆ ತಮ್ಮ ಹಣ ಜಮೆ ಮಾಡಿರುವುದರಿಂದ ಬ್ಯಾಂಕುಗಳ ಬಳಿ ಈಗ ಅತ್ಯಂತ ಕಡಿಮೆ ವೆಚ್ಚದ ಠೇವಣಿಗಳು ರಾಶಿ ಬಿದ್ದಿವೆ. ಹಾಗಾಗಿ ಜನರ ಉಳಿತಾಯ ಖಾತೆಗಳಲ್ಲಿನ ಹಣಕ್ಕೆ ನೀಡುವ ಬಡ್ಡಿದರವನ್ನು ಇಳಿಸುವುದು ಅನಿವಾರ್ಯವಾಗಿದೆ ಎಂದು ಪಂಜಾಬ್ ನ್ಯಾಶನಲ್ ಬ್ಯಾಂಕ್ ನ ಎಂಡಿ ಮತ್ತು ಸಿಇಓ ಆಗಿರುವ ಉಷಾ ಅನಂತಸುಬ್ರಮಣಿಯನ್ ಸಿಎನ್ಬಿಸಿ 18 ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್