ಕೆನೆಪದರ ಆದಾಯ ಮಿತಿ 15 ಲಕ್ಷ ರೂ.ಗೆ ಏರಿಸಲು ಆಗ್ರಹ
Team Udayavani, Jul 22, 2020, 7:05 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಹಿಂದುಳಿದ ವರ್ಗಕ್ಕೆ ಮೀಸಲಾತಿ ಅವಕಾಶ ಕಲ್ಪಿಸುವ ಕೆನೆಪದರ ವಾರ್ಷಿಕ ಆದಾಯ ಮಿತಿಯನ್ನು 12 ಲಕ್ಷ ರೂ.ಗೆ ಏರಿಸಲು ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ.
ಈ ನಡುವೆ ವಾರ್ಷಿಕ ಆದಾಯ ಮಿತಿಯನ್ನು 15 ಲಕ್ಷ ರೂ.ಗೆ ಏರಿಸುವಂತೆ ಬಿಜೆಪಿ ಒಬಿಸಿ ಸಂಸದರ ವಲಯದಲ್ಲಿ ಆಗ್ರಹ ಕೇಳಿಬಂದಿದೆ.
ಒಬಿಸಿ ಕಲ್ಯಾಣ ಸಂಬಂಧಿತ ಸಂಸದೀಯ ಮಂಡಳಿ ಅಧ್ಯಕ್ಷ, ಸಂಸದ ಗಣೇಶ್ ಸಿಂಗ್ ಈ ಕುರಿತು ಜು.5ರಂದು ಬಿಜೆಪಿಯ ಉಭಯ ಸದನಗಳ 112 ಒಬಿಸಿ ಸಂಸದರಿಗೆ ಪತ್ರ ಬರೆದಿದ್ದಾರೆ.
‘ಕೆನೆ ಪದರ ವಾರ್ಷಿಕ ಆದಾಯದ ಮಿತಿಯನ್ನು 12 ಲಕ್ಷಕ್ಕೆ ಏರಿಸುವ ಚಿಂತನೆಯಲ್ಲಿ ಸಂಬಳ ಮತ್ತು ಕೃಷಿ ಆದಾಯವನ್ನೂ ಸೇರಿಸಲಾಗುತ್ತಿದೆ. ಇದು ಸರಿಯಲ್ಲ’ ಎಂದು ಸಿಂಗ್ ಹೇಳಿದ್ದಾರೆ.
ಈ ಕುರಿತು ಪ್ರಧಾನ ಮಂತ್ರಿ, ಗೃಹಸಚಿವರಿಗೆ ಟ್ವೀಟ್ ಹಾಗೂ ಪತ್ರ ಸಂದೇಶಗಳ ಮೂಲಕ ಆಗ್ರಹಿಸಿ ಎಂದು ಸಂಸದರಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕೆನೆಪದರ ಆದಾಯ ಮಿತಿ ಹೆಚ್ಚಿಸುವ ಸಂಬಂಧ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ಪರಿಶೀಲನೆ ಕೈಗೆತ್ತಿಕೊಂಡಿದ್ದು, ಈ ನಡುವೆ ಬಿಜೆಪಿ ಒಬಿಸಿ ಸದಸ್ಯರ ಪತ್ರ ಮಹತ್ವ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್