ಕೋಮುಗಲಭೆಗೆ ಕರ್ನಾಟಕದಲ್ಲಿ 11 ಸಾವು
Team Udayavani, Mar 29, 2018, 2:34 PM IST
ನವದೆಹಲಿ: ದೇಶಾದ್ಯಂತ 2015-2017ರ ಅವಧಿಯಲ್ಲಿ ಉಂಟಾದ ಕೋಮುಗಲಭೆಗಳಿಗೆ 300 ಮಂದಿ ಅಸುನೀಗಿದ್ದಾರೆ. ಈ ಪೈಕಿ ಕರ್ನಾಟಕದಲ್ಲಿ 2016ರಲ್ಲಿ 101 ಘಟನೆಗಳು ನಡೆದಿದ್ದು, 11 ಮಂದಿ ಅಸುನೀಗಿದ್ದಾರೆ ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಹಂಸರಾಜ ಅಹಿರ್ ರಾಜ್ಯಸಭೆಗೆ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಎಂದರೆ, 195 ಕೋಮುಗಲಭೆಗಳು ನಡೆದಿವೆ. 44 ಜನ ಮೃತರಾಗಿದ್ದಾರೆ. ನಂತರದ ಸ್ಥಾನದಲ್ಲಿ ರಾಜಸ್ಥಾನ ಇದೆ. ಇಲ್ಲಿ 91 ಕೋಮು ಗಲಭೆ ಪ್ರಕರಣಗಳು ನಡೆದಿವೆ. 12 ಸಾವುಗಳು ಸಂಭವಿಸಿವೆ ಎಂದು ಅಹಿರ್ ಹೇಳಿದ್ದಾರೆ. 2017ರಲ್ಲಿ 822 ು ಗಲಭೆಗಳು ನಡೆದಿದ್ದು, 111 ಜನರು ಮೃತಪಟ್ಟು, 2,384 ಮಂದಿ ಗಾಯಗೊಂಡಿದ್ದಾರೆ ಎಂದಿದ್ದಾರೆ.