Thane ನಾಗರಿಕ ಆಸ್ಪತ್ರೆಯಲ್ಲಿ 24 ಗಂಟೆಗಳೊಳಗೆ 18 ರೋಗಿಗಳು ಮೃತ್ಯು!
ತನಿಖಾ ಸಮಿತಿ ರಚನೆಗೆ ಸಿಎಂ ಶಿಂಧೆ ಆದೇಶ
Team Udayavani, Aug 13, 2023, 6:30 PM IST
ಥಾಣೆ : ಮಹಾರಾಷ್ಟ್ರದ ಥಾಣೆಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ ಹದಿನೆಂಟು ರೋಗಿಗಳು ಸಾವನ್ನಪ್ಪಿದ್ದಾರೆ.
ಮೃತರಲ್ಲಿ ಹತ್ತು ಮಹಿಳೆಯರು ಮತ್ತು ಎಂಟು ಪುರುಷರು ಸೇರಿದ್ದಾರೆ ಎಂದು ಪೌರಾಯುಕ್ತ ಅಭಿಜಿತ್ ಬಂಗಾರ್ ಹೇಳಿದ್ದಾರೆ, ಆರು ಮಂದಿ ಥಾಣೆ ನಗರದವರು, ನಾಲ್ವರು ಕಲ್ಯಾಣ್, ಮೂವರು ಸಹಾಪುರ್, ಭಿವಂಡಿ, ಉಲ್ಲಾಸ್ನಗರ, ಗೋವಂಡಿ (ಮುಂಬೈ) ತಲಾ ಒಬ್ಬರು, ಅಜ್ಞಾತ ಸ್ಥಳದಿಂದ ಬಂದಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.
ಸ್ವತಂತ್ರ ತನಿಖಾ ಸಮಿತಿ ರಚನೆಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಆದೇಶ ನೀಡಿದ್ದಾರೆ ಎಂದು ಅಭಿಜಿತ್ ಬಂಗಾರ್ ಬಹಿರಂಗಪಡಿಸಿದ್ದಾರೆ. ಆರೋಗ್ಯ ಸೇವೆಗಳ ಆಯುಕ್ತರ ನೇತೃತ್ವದ ಸಮಿತಿಯು ಈ ಸಾವುಗಳ ಸುತ್ತಲಿನ ಕ್ಲಿನಿಕಲ್ ಅಂಶಗಳನ್ನು ತನಿಖೆ ಮಾಡುತ್ತದೆ.
ಮೃತ ರೋಗಿಗಳು ಮೂತ್ರಪಿಂಡದ ಕಲ್ಲುಗಳು, ದೀರ್ಘಕಾಲದ ಪಾರ್ಶ್ವವಾಯು, ಹುಣ್ಣುಗಳು, ನ್ಯುಮೋನಿಯಾ, ವಿಷ ಸೇವನೆ, ಸೆಪ್ಟಿಸೆಮಿಯಾದಿಂದ ಹಿಡಿದು ವಿವಿಧ ವೈದ್ಯಕೀಯ ತೊಡಕುಗಳೊಂದಿಗೆ ಬಳಲುತ್ತಿದ್ದರು ಎಂದು ಅಭಿಜಿತ್ ಬಂಗಾರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ