ನೋಟು ಅಮಾನ್ಯ ನಂತರ 2 ಲಕ್ಷ ನಕಲಿ ಕಂಪೆನಿ ಪತ್ತೆ
Team Udayavani, Aug 17, 2017, 8:00 AM IST
ಹೊಸದಿಲ್ಲಿ: ನವೆಂಬರ್ನಲ್ಲಾದ ನೋಟು ಅಮಾನ್ಯದ ನಂತರ ತಮ್ಮಲ್ಲಿರುವ ಅಕ್ರಮ ಹಣವನ್ನು ಬಚ್ಚಿಡುವ ಪ್ರಯತ್ನವಾಗಿ ದೇಶದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ನಕಲಿ ಕಂಪೆನಿಗಳು ತಲೆಯೆತ್ತಿರುವ ಆಘಾತಕಾರಿ ಅಂಶ ಬಯಲಾಗಿದೆ. ಈ ಎಲ್ಲಾ ಕಂಪೆನಿಗಳನ್ನು ಮುಚ್ಚುವಂತೆ ಕೇಂದ್ರ ಸರಕಾರ ಆದೇಶವನ್ನೂ ನೀಡಿದೆ.
ಕಪ್ಪು ಹಣದ ವಿರುದ್ಧ ಸಮರ ಸಾರುವ ಉದ್ದೇಶದಿಂದ ಕಳೆದ ವರ್ಷ ನವೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ, ದೇಶದಾದ್ಯಂತ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ್ದರು. ಈ ವೇಳೆ ತಮ್ಮಲ್ಲಿರುವ ಕಪ್ಪು ಹಣವನ್ನು ಬಿಳಿಯಾಗಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ತೊಡಗಿದ ಕಾಳಧನಿಕರಿಗೆ ನಕಲಿ ಕಂಪೆನಿ ಸೃಷ್ಟಿಸುವ ಐಡಿಯಾ ಹೊಳೆದಿದೆ. ಅದರಂತೆ 2016ರ ನವೆಂಬರ್ನಿಂದ ಈಚೆಗೆ ದೇಶದಾದ್ಯಂತ 2 ಲಕ್ಷಕ್ಕೂ ಅಧಿಕ ನಕಲಿ ಕಂಪೆನಿಗಳು ಹುಟ್ಟಿಕೊಂಡಿದ್ದು, ಈ ಕಂಪೆನಿಗಳ ಹೆಸರಲ್ಲಿ ವಿವಿಧ ಬ್ಯಾಂಕ್ಗಳಲ್ಲಿ ಹಣ ಇರಿಸಲಾಗಿದೆ.
ಪ್ರಸ್ತುತ ಅಕ್ರಮ ಸಿರಿವಂತರ ಈ ಪಿತೂರಿ ತಡೆಯಲು ಮುಂದಾಗಿರುವ ಪ್ರಧಾನಿಗಳ ಕಾರ್ಯಾಲಯ, ಕಾನೂನು ಜಾರಿ ಮತ್ತು ಆದಾಯ ತೆರಿಗೆ ಇಲಾಖೆಗಳ ಉನ್ನತ ಅಧಿಕಾರಿಗಳ ತಂಡವೊಂದನ್ನು ರಚಿಸಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಪತ್ತೆಯಾಗಿರುವ 2 ಲಕ್ಷಕ್ಕೂ ಅಧಿಕ ನಕಲಿ ಕಂಪೆನಿಗಳನ್ನು ಮುಚ್ಚಿಸುವಂತೆ ಕಳೆದ ತಿಂಗಳೇ ಸರಕಾರ ಆದೇಶಿಸಲಾಗಿದ್ದು, ಈಗಾಗಲೇ ಸ್ಥಗಿತಗೊಂಡಿವೆ.
ಚಾಲ್ತಿಯಲ್ಲಿರುವ ವ್ಯವಹಾರ ಅಥವಾ ಆಸ್ತಿಯನ್ನು ಹೊಂದಿರದ ಈ ರೀತಿಯ ನಕಲಿ ಕಂಪೆನಿಗಳ ಪತ್ತೆ ಹಾಗೂ ಅವುಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವುದು ನೋಟು ಅಮಾನ್ಯ ಕ್ರಮದ ಸ್ಪಷ್ಟ ಯಶಸ್ಸು ಎಂದು ಕೇಂದ್ರ ಹೇಳಿದೆ. “ಕಪ್ಪು ಹಣದ ವಿರುದ್ಧ ಯುದ್ಧ ಸಾರಿದ್ದು, ಪ್ರಸ್ತುತ ಕೈಗೊಂಡಿರುವ ಶಿಸ್ತು ಕ್ರಮ ನಕಲಿ ಕಂಪೆನಿಗಳಿಗೆ ಮಾರಕವಾಗಿ ಪರಿಣಮಿಸಲಿದೆ,’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ