ಅಸ್ಸಾಂನಲ್ಲಿ ಸರಣಿ ಭೂಕುಸಿತಕ್ಕೆ 20 ಬಲಿ
Team Udayavani, Jun 3, 2020, 8:59 AM IST
ಗುವಾಹಟಿ: ಭಾರೀ ಮಳೆ, ಪ್ರವಾಹದಿಂದ ತತ್ತರಿಸಿಹೋಗಿರುವ ಅಸ್ಸಾಂನಲ್ಲಿ ಮಂಗಳವಾರ ಸಂಭವಿಸಿದ ಸರಣಿ ಭೂಕುಸಿತವು ಕನಿಷ್ಠ 20 ಮಂದಿಯನ್ನು ಬಲಿಪಡೆದಿದೆ. ದಕ್ಷಿಣ ಅಸ್ಸಾಂನ ಬಾರಕ್ ವ್ಯಾಲಿಯ ಹೈಲಕಂಡಿ, ಕರೀಂಗಂಜ್ ಹಾಗೂ ಕಛಾರ್ ಜಿಲ್ಲೆಗಳಲ್ಲಿ ಮಂಗಳವಾರ ಸರಣಿ ಭೂಕುಸಿತ ಸಂಭವಿಸಿದೆ. 20 ಮಂದಿಯ ಪೈಕಿ ಕಛಾರ್ ಜಿಲ್ಲೆಯ ಲಖೀಪುರದಲ್ಲಿ 7 ಮಂದಿ ಸಾವಿಗೀಡಾದರೆ, ಹೈಲಕಂಡಿಯಲ್ಲಿ 7 ಮತ್ತು ಕರೀಂಗಂಜ್ ನಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ಧಾರಾಕಾರ ಮಳೆಯಿಂದಾಗಿಯೇ ಭೂಕುಸಿತದ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಸ್ಸಾಂ ಅರಣ್ಯ ಸಚಿವ ಪರಿಮಳ್ ಶುಕ್ಲವೈದ್ಯ ಅವರು, ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆ ಹಾಗೂ ಪ್ರವಾಹದಿಂದ ಒಟ್ಟಾರೆ 9 ಮಂದಿ ಅಸುನೀಗಿದ್ದಾರೆ. ಒಟ್ಟಾರೆ 321 ಗ್ರಾಮಗಳು ಜಲಾವೃತವಾಗಿದ್ದು, 3 ಲಕ್ಷದಷ್ಟು ಜನರು ನಿರ್ವಸಿತರಾಗಿದ್ದಾರೆ. ಪ್ರವಾಹದಿಂದಾಗಿ 2,678 ಹೆಕ್ಟೇರ್ ಬೆಳೆ ನಾಶವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು