ಸೌದಿ ಕ್ಷಮಾದಾನ: 20,000 ಅಕ್ರಮ ಭಾರತೀಯ ವಲಸಿಗರು ಮರಳಿ ದೇಶಕ್ಕೆ
Team Udayavani, May 3, 2017, 11:29 AM IST
ಚೆನ್ನೈ : ಸೌದಿ ಅರೇಬಿಯಕ್ಕೆ ಅಕ್ರಮವಾಗಿ ವಲಸೆ ಹೋದ, ವೀಸಾ ಅವಧಿ ಮೀರಿ ನೆಲೆ ನಿಂತ, ತಮಿಳು ನಾಡಿನ ವಲಸಿಗರೇ ಅಧಿಕ ಸಂಖ್ಯೆಯಲ್ಲಿರುವ ಸಹಸ್ರಾರು ಜನರು, ಇದೀಗ ಸೌದಿ ಸರಕಾರ ನೀಡಿರುವ 90 ದಿನಗಳ ಕ್ಷಮಾದಾನ ಅವಧಿಯ ಲಾಭವನ್ನು ಪಡೆದು ಸ್ವದೇಶಕ್ಕೆ ಮರಳಲು ಸಿದ್ಧರಾಗಿ ನಿಂತಿದ್ದಾರೆ.
ಸಮುದಾಯ ಕಲ್ಯಾಣ ಆಪ್ತ ಸಮಾಲೋಚಕ ಅನಿಲ್ ನೌತಿಯಾಲ್ ಅವರು ರಿಯಾಧ್ನಿಂದ ಟೈಮ್ಸ್ ಆಫ್ ಇಂಡಿಯಾ ಜತೆಗೆ ಮಾತನಾಡುತ್ತಾ, ಕಳೆದ ಸೋಮವಾರದ ಸಂಜೆಯ ತನಕ 20,321 ಭಾರತೀಯ ಪ್ರಜೆಗಳು ಸ್ವದೇಶಕ್ಕೆ ಮರಳಲು ಸಿದ್ಧರಾಗಿ ನಿಂತಿದ್ದಾರೆ ಎಂದು ತಿಳಿಸಿದ್ದಾರೆ.
ತಮಿಳು ನಾಡಿನ ಸುಮಾರು 1,500 ಮಂದಿ ಕಾರ್ಖಾನೆ ಕಾರ್ಮಿಕರು ಸೌದಿ ಸರಕಾರದ 90 ದಿನಗಳ ಕ್ಷಮಾದಾನ ಯೋಜನೆಯ ಲಾಭ ಪಡೆದ ದೇಶಕ್ಕೆ ಮರಳುತ್ತಿದ್ದಾರೆ . ಈ ಯೋಜನೆಯಡಿ ದೇಶಕ್ಕೆ ಮರಳು ನಿಂತಿರುವ ಅತ್ಯಧಿಕ ಕಾರ್ಮಿಕರು ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಸೇರಿದವರಾಗಿದ್ದಾರೆ ಎಂದು ಅನಿಲ್ ನೌತಿಯಾಲ್ ತಿಳಿಸಿದ್ದಾರೆ.
ಸೌದಿ ಸರಕಾರ ರಿಯಾಧ್ನಲ್ಲಿ ಸ್ವದೇಶಕ್ಕೆ ಮರಳ ಬಯಸುವ ಭಾರತೀಯ ಪ್ರಜೆಗಳಿಗಾಗಿಯೇ ಮೀಸಲಿರುವ ಕೇಂದ್ರವೊಂದನ್ನು ತೆರೆದಿದೆ ಎಂದು ಅನಿಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ