G20 Summit ; 28 ಅಡಿ ಎತ್ತರದ ‘ನಟರಾಜ’ ಪ್ರತಿಮೆ ಆಕರ್ಷಣೆಯ ಕೇಂದ್ರ ಬಿಂದು
ವಿಶ್ವದ ಅತಿ ಎತ್ತರದ 'ನಟರಾಜ'ನ ಪ್ರತಿಮೆ...
Team Udayavani, Sep 2, 2023, 4:56 PM IST
ಹೊಸದಿಲ್ಲಿ: ಇಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಸ್ಥಳದಲ್ಲಿ ಸ್ಥಾಪಿಸಲಾಗುತ್ತಿರುವ ವಿಶ್ವದ ಅತಿ ಎತ್ತರದ ‘ನಟರಾಜ’ನ ಪ್ರತಿಮೆಯು ಆಕರ್ಷಣೆಯ ಕೇಂದ್ರ ಬಿಂದುವಾಗಿ ಬೃಹತ್ ಜನಸಮೂಹವನ್ನು ಸೆಳೆಯುವ ನಿರೀಕ್ಷೆಯಿದೆ.
ಪೀಠ ಸೇರಿದಂತೆ 28 ಅಡಿ ಎತ್ತರದ ಈ ಪ್ರತಿಮೆಯನ್ನು ಪ್ರಾಚೀನ ಚೋಳರ ಕಂಚಿನ ತಯಾರಿಕೆಗೆ ಬಳಸಲಾಗಿದ್ದ ಲೋಹ ಎರಕದ ಪ್ರಾಚೀನ ಲಾಸ್ಟ್-ವ್ಯಾಕ್ಸ್ ತಂತ್ರವನ್ನು ಬಳಸಿ ತಯಾರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
“ಜಿ 20 ನಾಯಕರ ಶೃಂಗಸಭೆಯು ಸೆಪ್ಟೆಂಬರ್ 9-10 ರವರೆಗೆ ಪ್ರಗತಿ ಮೈದಾನದಲ್ಲಿ ಹೊಸದಾಗಿ ನಿರ್ಮಿಸಲಾದ ಅಂತಾರಾಷ್ಟ್ರೀಯ ಸಮಾವೇಶ ಮತ್ತು ಪ್ರದರ್ಶನ ಕೇಂದ್ರವಾದ ‘ಭಾರತ್ ಮಂಟಪ’ದಲ್ಲಿ ನಡೆಯಲಿದ್ದು, ಕ್ಯಾಂಪಸ್ನಲ್ಲಿ ನಟರಾಜನ ಅತ್ಯಂತ ಎತ್ತರದ ಪ್ರತಿಮೆಯನ್ನು ಸ್ಥಾಪಿಸುತ್ತಿದ್ದೇವೆ” ಎಂದು ಮೂಲವೊಂದು ತಿಳಿಸಿದೆ.
ಪ್ರಗತಿ ಮೈದಾನಕ್ಕೆ ಎದುರಾಗಿರುವ ಮಥುರಾ ರಸ್ತೆಯನ್ನು ವಿಷಯಾಧಾರಿತ ಪೋಸ್ಟರ್ಗಳು, ಕಲಾತ್ಮಕ ಲೋಗೊಗಳು ಮತ್ತು G20 ಸದಸ್ಯ ರಾಷ್ಟ್ರಗಳ ಧ್ವಜಗಳಿಂದ ಅಲಂಕರಿಸಲಾಗಿದೆ.ಶೃಂಗಸಭೆಯ ಆರಂಭಿಕ ದಿನದಂದು, ಸಂಸ್ಕೃತಿ ಸಚಿವಾಲಯವು ರೂಪಿಸಿರುವ ‘ಸಂಸ್ಕೃತಿ ಕಾರಿಡಾರ್’ ಅನ್ನು ಭಾರತ ಮಂಟಪದಲ್ಲಿ ಅನಾವರಣಗೊಳಿಸಲಾಗುತ್ತದೆ.
‘ಸಂಸ್ಕೃತಿ ಕಾರಿಡಾರ್’ ಪರಿಕಲ್ಪನೆಯು ಎಲ್ಲಾ 29 ದೇಶಗಳಿಂದ “ಉತ್ತಮ ಮತ್ತು ಅತ್ಯಮೂಲ್ಯವಾದ ಕಲಾಕೃತಿಗಳನ್ನು ಒಂದೇ ಜಾಗದಲ್ಲಿ ತರುವುದಾಗಿದ್ದು ಅದು ಜಿ 20 ನ ವಿಷಯವಾದ ವಸುಧೈವ ಕುಟುಂಬಕಂನ ಸಾರವನ್ನು ಸೂಚಿಸುತ್ತದೆ. ಕಾರಿಡಾರ್ ಸಂಸ್ಕೃತಿಯು ಎಲ್ಲರನ್ನು ಒಂದುಗೂಡಿಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ