ಮೂವರನ್ನು ಹತ್ಯೆಗೈದ ಗೋವು ಕಳ್ಳರು?
Team Udayavani, Jul 8, 2018, 6:00 AM IST
ಶಿಲ್ಲಾಂಗ್: ಮೇಘಾಲಯದಲ್ಲಿ ಗೋವು ಕಳ್ಳಸಾಗಣೆದಾರರು ಎನ್ನಲಾದ ತಂಡವೊಂದು ಗ್ರಾಮದ ಮುಖ್ಯಸ್ಥ, ಇತರ ಮೂವರನ್ನು ಕೊಲೆಗೈದಿದೆ. ಬಾಂಗ್ಲಾದೇಶದ ಗಡಿಯ ವೆಸ್ಟ್ ಜೈಂತಿಯಾ ಹಿಲ್ಸ್ ಜಿಲ್ಲೆಯಲ್ಲಿ ಈ ಕೃತ್ಯ ಜರುಗಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಮೂವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಈ 6 ಜನ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಗ್ರಾಮಕ್ಕೆ ಹಿಂದಿರುಗುವ ವೇಳೆ ಘಟನೆ ನಡೆದಿದೆ. ಇತ್ತೀಚೆಗೆ ಗ್ರಾಮದಲ್ಲಿ ಹಸು ಕದಿಯಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಥಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹತ್ಯೆ ನಡೆದಿರಬಹುದೆನ್ನಲಾಗಿದೆ.