10 ಸಾವಿರ ರೈತರಿಂದ 40 ಕಿ.ಮೀ. ಪಾದಯಾತ್ರೆ
Team Udayavani, Nov 23, 2018, 6:00 AM IST
ಮುಂಬಯಿ: ಬರ ಪರಿಹಾರ, ಸಾಲ ಮನ್ನಾ ಅನುಷ್ಠಾನ, ಬುಡಕಟ್ಟು ಜನಾಂಗಕ್ಕೆ ಅರಣ್ಯ ಹಕ್ಕುಗಳ ವರ್ಗಾವಣೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಾರಾಷ್ಟ್ರದ ಸುಮಾರು 10 ಸಾವಿರ ರೈತರು 40 ಕಿ.ಮೀ. ಪಾದಯಾತ್ರೆ ನಡೆಸಿ ಗುರುವಾರ ಆಜಾದ್ ಮೈದಾನ ತಲುಪಿದ್ದಾರೆ. ರೈತರ ನಿಯೋಗದೊಂದಿಗೆ ಸಿಎಂ ದೇವೇಂದ್ರ ಫಡ್ನವೀಸ್ ಮಾತುಕತೆ ನಡೆಸಿದ್ದು, ಡಿಸೆಂಬರ್ ಒಳಗಾಗಿ ಎಲ್ಲ ಬೇಡಿಕೆಗಳನ್ನೂ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.