‘Lottery King’ನಿಂದ ಡಿಎಂಕೆಗೆ 509 ಕೋಟಿ ರೂ.!
Team Udayavani, Mar 18, 2024, 6:20 AM IST
ಹೊಸದಿಲ್ಲಿ: ರಾಜಕೀಯ ಪಕ್ಷಗಳಿಗೆ ಅತೀ ಹೆಚ್ಚು ದೇಣಿಗೆ ನೀಡುವ ಮೂಲಕ ಸುದ್ದಿಯಲ್ಲಿರುವ “ಲಾಟರಿ ಕಿಂಗ್’ ಸ್ಯಾಂಟಿಯಾಗೋ ಮಾರ್ಟಿನ್ ನೇತೃತ್ವದ ಫ್ಯೂಚರ್ ಗೇಮಿಂಗ್ ಕಂಪೆನಿ, ತಮಿಳು ನಾಡಿನ ಆಡಳಿತಾರೂಢ ಡಿಎಂಕೆ ಪಕ್ಷಕ್ಕೆ 509 ಕೋಟಿ ರೂ. ದೇಣಿಗೆ ನೀಡಿದೆ!
ಹೌದು, ರವಿವಾರ ಕೇಂದ್ರ ಚುನಾವಣ ಆಯೋಗ ಪ್ರಕಟಿಸಿರುವ ಪಟ್ಟಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಮಾ.14ರಂದು ಚುನಾವಣ ಆಯೋಗ ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ ಗೇಮಿಂಗ್ ಫ್ಯೂಚರ್ ಕಂಪೆನಿಯು 1,368 ಕೋಟಿ ರೂ. ಬಾಂಡ್ಗಳನ್ನು ಖರೀದಿಸಿದ ಮಾಹಿತಿ ಗೊತ್ತಾಗಿತ್ತು.
ರವಿವಾರ ಆಯೋಗ ಪ್ರಕಟಿಸಿರುವ ಮಾಹಿ ತಿಯ ಪ್ರಕಾರ, ಫ್ಯೂಚರ್ ಗೇಮಿಂಗ್ ರಾಜಕೀಯ ಪಕ್ಷಗಳಿಗೆ ನೀಡಿದ ಒಟ್ಟು ದೇಣಿಗೆಯಲ್ಲಿ ಶೇ.37ರಷ್ಟು ದೇಣಿಗೆಯನ್ನು ಡಿಎಂಕೆ ಪಕ್ಷವೊಂದಕ್ಕೆ ನೀಡಿದೆ. ಆದರೆ ಉಳಿದ ಹಣವನ್ನು ಯಾವ ಪಕ್ಷಗಳಿಗೆ ನೀಡಿದೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಬಾಂಡ್ಗಳ ಮೂಲಕ ಡಿಎಂಕೆಗೆ ಒಟ್ಟಾರೆ 656 ಕೋ. ರೂ. ಬಂದಿದ್ದು, ಈ ಪೈಕಿ ಫ್ಯೂಚರ್ ಗೇಮಿಂಗ್ ಅತೀ ಹೆಚ್ಚು ದೇಣಿಗೆ ನೀಡಿದೆ. ಡಿಎಂಕೆಯು ಮೇಘಾ ಎಂಜಿನಿಯರಿಂಗ್ 105 ಕೋಟಿ ರೂ., ಇಂಡಿಯಾ ಸಿಮೆಂಟ್ಸ್ 14 ಕೋಟಿ ರೂ., ಮತ್ತು ಸನ್ ಟಿವಿಯಿಂದ 100 ಕೋಟಿ ರೂ. ದೇಣಿಗೆ ಪಡೆದಿದೆ.
ಬಹಳಷ್ಟು ಪಕ್ಷಗಳಿಗೆ ಚುನಾವಣ ಬಾಂಡ್ಗಳ ಮೂಲಕ ದೇಣಿಗೆ ಬಂದಿಲ್ಲ!
ಚುನಾವಣ ಬಾಂಡ್ ಮೂಲಕ ಕೆಲವು ಪಕ್ಷಗಳು ನೂರಾರು ಕೋಟಿ ರೂ. ದೇಣಿಗೆ ಪಡೆದರೆ, ಬಹಳಷ್ಟು ಪಕ್ಷಗಳಿಗೂ ಒಂದು ಪೈಸೆಯೂ ದೇಣಿಗೆ ಬಂದಿಲ್ಲ! 500ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಚುನಾವಣ ಬಾಂಡ್ ಕುರಿತು ಮಾಹಿತಿಯನ್ನು ಒದಗಿಸಿವೆ. ರಾಷ್ಟ್ರೀಯ ಪಕ್ಷವಾಗಿರುವ ಎನ್ಪಿಪಿ, ಉತ್ತರ ಪ್ರದೇಶದ ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ), ಎಡಪಕ್ಷಗಳಾದ ಸಿಪಿಐ, ಸಿಪಿಎಂ, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ಸಿಪಿಐ-ಎಂಎಲ್ ಸೇರಿ ಬಹಳಷ್ಟು ಪಕ್ಷಗಳು ಬಾಂಡ್ ಮೂಲಕ ದೇಣಿಗೆ ಪಡೆದಿಲ್ಲ ಎಂಬ ವಿಚಾರವೂ ಈಗ ಬೆಳಕಿಗೆ ಬಂದಿದೆ.
ಬಾಂಡ್ ಮೂಲಕ ಬಿಜೆಪಿ ಖಾತೆ ಸೇರಿದ ಕಪ್ಪುಹಣ: ಕೈ ಆರೋಪ
ಚುನಾವಣ ಬಾಂಡ್ ಸ್ಕೀಮ್ ಮೂಲಕ ಕಪ್ಪು ಹಣವು ಬಿಜೆಪಿಯ ಖಾತೆಗೆ ಸೇರಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಇದೊಂದು ಕಿಕ್ ಬ್ಯಾಕ್ ಪ್ರಕರಣವಾಗಿದೆ ಎಂದೆದಿದೆ. ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ಅವರು ಬಿಜೆಪಿ ವಿರುದ್ಧ ಕಡು ಟೀಕೆ ಮಾಡಿದ್ದು, ಚುನಾವಣಾ ಬಾಂಡ್ ಹಗರಣ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಜೈರಾಮ್ ರಮೇಶ್, 2018ರಲ್ಲಿ ರಚಿಸಲಾದ ಚುನಾವಣ ಬಾಂಡ್ ಅತೀದೊಡ್ಡ ಸುಲಿಗೆ ಹಗರಣವಾಗಿದೆ. ಪಿಎಂಎಲ್ ಉಲ್ಲಂ ಸಿದ 19 ಕಂಪೆನಿಗಳನ್ನು ವಿತ್ತ ಸಚಿವಾಲಯ ಗುರುತಿಸಿತ್ತು. ಆ ಕಂಪೆನಿಗಳಿಂದ ಬಿಜೆಪಿ 2,717 ಕೋಟಿ ರೂ. ಬಾಂಡ್ ಮೂಲಕ ಸಂಗ್ರಹಿಸಿದ ಎಂದು ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
MUST WATCH
ಹೊಸ ಸೇರ್ಪಡೆ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು
Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್