ಸುವರ್ಣ ಸಂಭ್ರಮದ ‘ಯಕ್ಷಿ’ಗೆ ನೂತನ ಕಾಯಕಲ್ಪ
Team Udayavani, Feb 3, 2019, 1:05 AM IST
ತಿರುವನಂತಪುರ: ಕೇರಳದ ಸುಪ್ರಸಿದ್ಧ ಪ್ರತಿಮೆಯಾದ ‘ಯಕ್ಷಿ’ಯು ನಿರ್ಮಾಣವಾಗಿ 50 ವರ್ಷಗಳು ಸಂದ ಹಿನ್ನೆಲೆಯಲ್ಲಿ ಹಾಗೂ ಹವಾಮಾನ, ಪ್ರದೂ ಷಯಿಂದ ಪ್ರತಿಮೆಯ ಚೆಲುವು ಮಾಸಿರುವ ಕಾರಣದಿಂದಾಗಿ ಪ್ರತಿಮೆಗೆ ನೂತನ ಕಾಯಕಲ್ಪ ನೀಡಲು ತೀರ್ಮಾನಿಸಲಾಗಿದೆ. ಪಾಲಕ್ಕ್ಕಾಡ್ ಜಿಲ್ಲೆಯ ಮಳಂಪುಳ ಗಾರ್ಡನ್ನಲ್ಲಿರುವ ಈ ಪ್ರತಿಮೆಯನ್ನು 1969ರಲ್ಲಿ ಕೇರಳದ ಖ್ಯಾತ ಶಿಲ್ಪಿ ಕನಾಯಿ ಕುಹಿಮಾರನ್ ಕೆತ್ತಿದ್ದರು. ಅವರಿಗೀಗ 81 ವರ್ಷ ವಯಸ್ಸಾಗಿದ್ದು, ಈ ಇಳಿ ವಯಸ್ಸಿನಲ್ಲಿ ಅವರೇ ಖುದ್ದಾಗಿ ಈ ಪ್ರತಿಮೆಯ ಕಾಯಕಲ್ಪಕ್ಕೆ ಮುಂದಾಗಿರುವುದು ವಿಶೇಷ. ನಗ್ನ ಮಹಿಳೆಯೊಬ್ಬಳು ಕುಳಿತ ಭಂಗಿಯಲ್ಲಿರುವ ಈ ಶಿಲ್ಪ ಐವತ್ತು ವರ್ಷಗಳ ಹಿಂದೆ ನಿರ್ಮಾಣವಾದಾಗ, ಸಂಪ್ರದಾಯವಾದಿಗಳಿಂದ ತೀವ್ರ ವಿರೋಧ ಬಂದಿದ್ದರೂ, ದೇಶ ವಿದೇಶ ಗಳ ಅನೇಕ ಶಿಲ್ಪ ಕಲಾಭಿಮಾನಿಗಳಿಂದ ಹಾಗೂ ಶಿಲ್ಪಕಲಾ ತಜ್ಞರಿಂದ ಮೆಚ್ಚುಗೆಯ ಮಹಾಪೂರ ಹರಿದುಬಂದಿತ್ತು. ಶಿಲ್ಪಕಲಾ ನೈಪುಣ್ಯತೆಗೆ ಇದು ಜೀವಂತ ಸಾಕ್ಷಿ ಎಂದು ಈ ಶಿಲ್ಪವನ್ನು ಬಿಂಬಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್