23 ವರ್ಷ ಬಳಿಕ ಸೆರೆ ಸಿಕ್ಕ ಕಳ್ಳ ಸಾಗಣೆದಾರ
Team Udayavani, Jul 18, 2020, 9:12 AM IST
ಸಾಂದರ್ಭಿಕ ಚಿತ್ರ
ಮುಂಬಯಿ: ಅಕ್ರಮ ವಜ್ರ ಕಳ್ಳಸಾಗಣೆ ಮೂಲಕ ಸರಕಾರಕ್ಕೆ 130 ಕೋಟಿ ರೂ. ವಂಚಿಸಿದ್ದ ಖತ ರ್ನಾಕ್ ವ್ಯಾಪಾರಿ ಬರೋಬ್ಬರಿ 23 ವರ್ಷಗಳ ಬಳಿಕ ಸೆರೆ ಸಿಕ್ಕಿದ್ದಾನೆ. ಪವೇಶ್ ಜಾವೇರಿ (53) ಎಂಬಾತ ಸಿಂಗಾಪುರದಿಂದ ಕಚ್ಚಾ ಚಿನ್ನ ಹಾಗೂ ವಜ್ರವನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳುತ್ತಿದ್ದನು. ಈ ಸಂಬಂಧ 130 ಕೋಟಿ ರೂ. ತೆರಿಗೆ ವಂಚಿಸಿದ್ದನು. ಈ ಕುರಿತು 1997ರಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿತ್ತು. ಈ ವೇಳೆ ಪವೇಶ್ ಜಾವೇರಿ ತಲೆ ಮರೆಸಿಕೊಂಡಿದ್ದನು. ಮುಂಬಯಿ ಅಪರಾಧ ವಿಭಾಗದ ಪೊಲೀಸರು ಕಡೆಗೂ ಬೆನ್ನತ್ತಿ 23 ವರ್ಷಗಳ ಬಳಿಕ ಪರೇಶ್ನನ್ನು ಸೆರೆ ಹಿಡಿದ್ದಾರೆ.