ಪ್ರತಿನಿಧಿ ನೇಮಿಸಿ ವಿವಾದಕ್ಕೆ ಗುರಿಯಾದ ಸಂಸದ ಸನ್ನಿ ದೇವಲ್, ವ್ಯಾಪಕ ಟೀಕೆ
Team Udayavani, Jul 2, 2019, 4:04 PM IST
ಹೊಸದಿಲ್ಲಿ : ಲೋಕಸಭೆಗೆ ಹೊಸದಾಗಿ ಚುನಾಯಿತರಾಗಿರುವ ಬಿಜೆಪಿ ಸಂಸದ ಸನ್ನಿ ದೇವಲ್ ಅವರು ತನ್ನ ಗುರುದಾಸ್ಪುರ ಸಂಸದೀಯ ಕ್ಷೇತ್ರದ ಸಕಲ ಸಂಗತಿ, ಸಮಸ್ಯೆಗಳನ್ನು ನಿಭಾಯಿಸಲು ತನ್ನ ಪ್ರತಿನಿಧಿಯೊಬ್ಬರನ್ನು ನೇಮಿಸಿರುವುದು ವ್ಯಾಪಕ ವಿವಾದ, ಟೀಕೆ, ಖಂಡನೆಗೆ ಅವಕಾಶ ಮಾಡಿಕೊಟ್ಟಿದೆ.
ಚಿತ್ರನಟನಾಗಿದ್ದು ರಾಜಕಾರಣಿಯಾಗಿ ಪರಿವರ್ತಿತರಾಗಿರುವ ಸನ್ನಿ ದೇವಲ್ ತಮ್ಮ ಅಧಿಕೃತ ಲೆಟರ್ ಹೆಡ್ ನಲ್ಲಿ ಕಳೆದ ಜೂನ್ 26ರಂದು ಬರೆದಿರುವ ಪತ್ರದಲ್ಲಿ ಹೀಗೆ ಹೇಳಿದ್ದಾರೆ :
“ನನ್ನ ಗುರುದಾಸ್ಪುರ ಸಂಸದೀಯ ಕ್ಷೇತ್ರದ ಸಕಲ ಸಭೆಗಳಲ್ಲಿ ನನ್ನ ಪರವಾಗಿ ಭಾಗವಹಿಸಲು, ಮತ್ತು ಕ್ಷೇತ್ರದ ಯಾವತ್ತೂ ಸಂಗತಿಗಳು ಮತ್ತು ಸಮಸ್ಯೆಗಳನ್ನು ನಿಭಾಯಿಸಿ ಕೆಲಸ ಕಾರ್ಯ ಕೈಗೊಳ್ಳಲು, ನಾನು ಈ ಮೂಲಕ ಪಂಜಾಬ್ ನ ಮೊಹಾಲಿ ಜಿಲ್ಲೆಯ ಪಲಹೇರಿ ಗ್ರಾಮದ ನಿವಾಸಿ, ಸುಪೀಂದರ್ ಸಿಂಗ್ ಅವರ ಪುತ್ರ ಗುರುಪ್ರೀತ್ ಸಿಂಗ್ ಪಲಹೇರಿ ಅವರನ್ನು ನನ್ನ ಪ್ರತಿನಿಧಿಯಾಗಿ, ನೇಮಿಸಿದ್ದೇನೆ’.
ಸನ್ನಿ ದೇವಲ್ ಅವರ ಈ ಪ್ರತಿನಿಧಿ ನೇಮಕಾತಿ ಪತ್ರ ಬಹಿರಂಗವಾಗುತ್ತಲೇ ಕಾಂಗ್ರೆಸ್ ಪಕ್ಷ ಅವರನ್ನು ಕಟವಾಗಿ ಟೀಕಿಸಿದೆ.
‘ದೇವಲ್ ಅವರನ್ನು ಮತದಾರರು ಆಯ್ಕೆ ಮಾಡಿರುವುದು ಕೇವಲ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವುದಕ್ಕಾಗಿ ಎಂಬುದೀಗ ಸಾಬೀತಾಗಿದೆ. ಮಾರ್ಕೆಟಿಂಗ್ ತತ್ವ ಪ್ರಕಾರ ಗ್ರಾಹಕ ಯಾವತ್ತೂ ಸರಿ; ಅಂತೆಯೇ ಪ್ರಜಾಸತ್ತೆಯಲ್ಲಿ ಮತದಾರನೇ ಸರಿ; ಇದನ್ನು ಈಗ ಎಲ್ಲರೂ ಒಪ್ಪಬೇಕಾಗುತ್ತದೆ. ಮತದಾರರು ಸನ್ನಿ ದೇವಲ್ ಅವರಿಂದ, ಸೆಲ್ಫಿ ಬಿಟ್ಟರೆ ಬೇರೇನನ್ನೂ ಬಯಸಿರಲಿಲ್ಲ ಎಂಬುದೀಗ ಸ್ಪಷ್ಟವಾಗಿದೆ’ ಎಂದು ಕಾಂಗ್ರೆಸ್ ನಾಯಕ ಸುನೀಲ್ ಜಾಖಡ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
MUST WATCH
ಹೊಸ ಸೇರ್ಪಡೆ
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ