ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?
ಅಬ್ದುಲ್ ಅಜೀಜ್ ಇನ್ನು ರಾಜಸೇವಕನಂತೆ ನಿಲ್ಲುವುದಿಲ್ಲ
Team Udayavani, Sep 18, 2020, 11:02 PM IST
ಚೆನ್ನೈ: ಕಳೆದ 37 ವರ್ಷಗಳಿಂದ ಚೆನ್ನೈನ ವಿಜಿಪಿ ಯೂನಿವರ್ಸಲ್ ಕಿಂಗ್ಡಮ್ ಥೀಮ್ ಪಾರ್ಕ್ನ ಪ್ರವೇಶ ದ್ವಾರದಲ್ಲಿ ಪ್ರತಿಮೆಯಂತೆ ನಿಂತು, ಥೀಮ್ ಪಾರ್ಕ್ಗೆ ಬರುವ ಎಲ್ಲರಿಗೂ ಚಿರಪರಿಚಿತರಾಗಿದ್ದ ಅಬ್ದುಲ್ ಅಜೀಜ್ (56), ತಮ್ಮ ದೀರ್ಘಕಾಲದ ವೃತ್ತಿಯನ್ನು ಸದ್ಯದಲ್ಲೇ ತೊರೆಯುವ ಬಗ್ಗೆ ಚಿಂತನೆ ನಡೆಸಲಾರಂಭಿಸಿದ್ದಾರೆ.
1985ರಲ್ಲಿ ಇಲ್ಲಿ ಕೆಲಸಕ್ಕೆ ಸೇರಿದ್ದ ಅವರಿಗೆ ಪ್ರವೇಶ ದ್ವಾರದಲ್ಲಿ ರಾಜಸೇವಕನ ಉಡುಪಿನಲ್ಲಿ ದ್ವಾರದ ಮುಂದೆ ಪ್ರತಿಮೆಯಂತೆ ನಿಲ್ಲುವ ಕೆಲಸವನ್ನು ನೀಡಲಾಗಿತ್ತು. ಹೀಗೆ, ನಿಂತ ಕಡೆ ನಿಲ್ಲುವ ಉದ್ಯೋಗವನ್ನು ಕಳೆದ 37 ವರ್ಷಗಳಿಂದಲೂ ಶ್ರದ್ಧೆಯಿಂದ ಮಾಡುತ್ತಾ ಬಂದಿರುವ ಅವರೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದೇಶದಲ್ಲಿ ಕೊರೊನಾ ಲಾಕ್ಡೌನ್ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಥೀಮ್ ಪಾರ್ಕ್ ಮುಚ್ಚಿದೆ. ಸದ್ಯಕ್ಕೆ ಅದು ಮತ್ತೆ ಶುರುವಾದ ಸೂಚನೆಗಳಿಲ್ಲ. ಅಲ್ಲಿನ ಆಡಳಿತ ಮಂಡಳಿಯಲ್ಲಿ ವಿಚಾರಿಸಿದರೆ ಅ. 1ರಿಂದ ಪಾರ್ಕ್ ಶುರುವಾಗುತ್ತದೆ ಎಂಬ ಉತ್ತರ ಬರುತ್ತದಾದರೂ ಆ ಬಗ್ಗೆ ಖಚಿತತೆ ಇಲ್ಲ. ಹಾಗಾಗಿ, ಸಂಬಳವಿಲ್ಲದೆ ಕಷ್ಟಪಡುವಂತಾಗಿದೆ ಅಬ್ದುಲ್ ಅವರ ಜೀವನ. “”ಮಾರ್ಚ್ ತಿಂಗಳಲ್ಲಿ ನಾನು ಕಡೆಯ ಸಂಬಳ ಪಡೆದದ್ದು. ಹಾಗಾಗಿ, ಜೀವನ ಕಷ್ಟವಾಗಿದೆ. ಬೇರೆ ಉದ್ಯೋಗ ಹುಡುಕುವ ಆಲೋಚನೆಯಲ್ಲಿದ್ದೇನೆ” ಎಂದಿದ್ದಾರೆ ಅವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು