ಉ.ಪ್ರ.ದ 11 ವಿಧಾನಸಭಾ ಸೀಟುಗಳ ಬೈಪೋಲ್ : ಎಸ್ಪಿ ಏಕಾಂಗಿ ಹೋರಾಟ
Team Udayavani, Jun 4, 2019, 3:40 PM IST
ಲಕ್ನೋ : ಉತ್ತರ ಪ್ರದೇಶದ ಮಹಾ ಘಟಬಂಧನದಿಂದ ಹೊರಬರಲು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ನಿರ್ಧರಿಸಿದ ಬೆನ್ನಿಗೇ ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್ ಯಾದವ, ರಾಜ್ಯ ವಿಧಾನಸಭೆಯ 11 ಸೀಟುಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ತನ್ನ ಪಕ್ಷ ಏಕಾಂಗಿಯಾಗಿ ಹೋರಾಡುವುದೆಂದು ಪ್ರಕಟಿಸಿದರು.
ಬಿಎಸ್ಪಿ ಜತೆಗಿನ ಮೈತ್ರಿ ಸಂಪೂರ್ಣವಾಗಿ ಕಡಿದು ಹೋದಲ್ಲಿ ಉಪ ಚುನಾವಣೆ ನಡೆಯಲಿರುವ ಎಲ್ಲ 11 ವಿಧಾನಸಭಾ ಸೀಟುಗಳಿಗೆ ಸಮಾಜವಾದಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸುವುದು; ಈ ಬಗ್ಗೆ ಪಕ್ಷದ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಲಾಗುವುದು; ನಮ್ಮ ಮುಂದಿನ ಮಾರ್ಗ ಬೇರ್ಪಟ್ಟರೂ ನಾವದನ್ನು ಸ್ವಾಗತಿಸುತ್ತೇವೆ ಎಂದು ಅಖೀಲೇಶ್ ಹೇಳಿದರು.
ಮಾಯಾವತಿ ಅವರು ಏಕಾಂಗಿಯಾಗಿ ಹೋರಾಡಲು ನಿರ್ಧರಿಸುವರೆಂಬುದನ್ನು ನೀವು ನಿರೀಕ್ಷಿಸುವಿರಾ ಎಂಬ ಮಾಧ್ಯಮದ ಪ್ರಶ್ನೆಗೆ ಅಖೀಲೇಶ್, “ಅದಕ್ಕೆ ಉತ್ತರಿಸುವುದು ಕಷ್ಟ; ನಮ್ಮ ಹಾದಿಗಳು ಬೇರ್ಪಟ್ಟರೂ ನಾವದನ್ನು ಸ್ವಾಗತಿಸುತ್ತೇವೆ; ಆಕೆಯ ಪಕ್ಷದ ಕಾರ್ಯಕರ್ತರಿಗೆ ನಮ್ಮ ಶುಭ ಹಾರೈಕೆಗಳು” ಎಂದು ಹೇಳಿದರು.