“ಬ್ರಿಟಿಷರು ನಮ್ಮನ್ನು ಒಡೆದಿದ್ದು ಹೀಗೇ’: ದಕ್ಷಿಣ-ಉತ್ತರ ಸಿನಿ ಜಗಳದ ಬಗ್ಗೆ ಅಕ್ಷಯ್ ಕಿಡಿ
ಒಗ್ಗಟ್ಟಿನ ಮಾತನ್ನಾಡಿದ ಹಲವು ಬಾಲಿವುಡ್ ತಾರೆಯರು
Team Udayavani, May 22, 2022, 10:22 PM IST
ಮುಂಬೈ: ಹಿಂದಿ ಭಾಷೆ ವಿಚಾರವಾಗಿ ದಕ್ಷಿಣ ಮತ್ತು ಉತ್ತರ ಸಿನಿ ರಂಗದವರ ನಡುವೆ ಉಂಟಾಗಿರುವ ವೈಮನಸ್ಸಿನ ಕುರಿತಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮಾತನಾಡಿದ್ದಾರೆ. “ಈ ರೀತಿ ಒಳ ಜಗಳದಿಂದಾಗಿಯೇ ಬ್ರಿಟಿಷರು ನಮ್ಮ ಮೇಲೆ ಆಕ್ರಮಣ ಮಾಡಿ, ಆಳಿದರು’ ಎಂದು ಅವರು ಹೇಳಿದ್ದಾರೆ.
“ಯಾರಾದರೂ ಸಿನಿ ರಂಗದ ವಿಚಾರದಲ್ಲಿ ದಕ್ಷಿಣ-ಉತ್ತರ ಎಂದರೆ ನನಗೆ ಇಷ್ಟವಾಗುವುದಿಲ್ಲ. ನಾವೆಲ್ಲರೂ ಒಂದೇ. ಈ ರೀತಿ ಜಗಳದಿಂದಾಗಿಯೇ ಬ್ರಿಟಿಷರು ನಮ್ಮನ್ನು ಒಡೆದು, ಆಕ್ರಮಣ ಮಾಡಿ, ಆಳಿದರು ಎನ್ನುವುದನ್ನು ಮರೆಯಬಾರದು. ಆದರೆ ಅದರಿಂದ ನಾವಿನ್ನೂ ಪಾಠ ಕಲಿತೇ ಇಲ್ಲ. ನಾವೆಲ್ಲರೂ ಒಂದೇ ಎಂದು ಯಾವಾಗ ಅರ್ಥ ಮಾಡಿಕೊಳ್ಳುತ್ತೇವೋ ಆಗ ಇನ್ನಷ್ಟು ಚೆನ್ನಾಗಿ ಕೆಲಸಗಳಾಗುತ್ತವೆ’ ಎಂದಿದ್ದಾರೆ ಅಕ್ಷಯ್.
ಇದೇ ವಿಚಾರವಾಗಿ ಬಾಲಿವುಡ್ನ ಬೇರೆ ಬೇರೆ ನಟ ನಟಿಯರೂ ಮಾತನಾಡಿದ್ದಾರೆ. “ಸಾಮಾನ್ಯ ಭಾಷೆ ಹೊಂದುವ ಬದಲು ಎಲ್ಲರ ಹೃದಯ ಒಂದಾಗಿರಬೇಕು. ಎಲ್ಲ ಭಾಷೆಗೂ ಸೂಕ್ತ ಗೌರವ ಸಿಗಬೇಕು. ಹಿಂದಿ ಬರುವುದಿಲ್ಲ ಎನ್ನುವ ಕಾರಣಕ್ಕೇ ಅವರನ್ನು ಬೇರೆ ರೀತಿಯಲ್ಲಿ ನೋಡಬಾರದು’ ಎಂದಿದ್ದಾರೆ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಆಯುಷ್ಮಾನ್ ಖುರಾನ.
ಕೇನ್ಸ್ ಚಲನಚಿತ್ರೋತ್ಸದವಲ್ಲಿ ಭಾಗಿಯಾಗಿರುವ ನಟಿ ಅದಿತಿ ರಾವ್ ಹೈದರಿ ಕೂಡ ಮಾತನಾಡಿದ್ದು, “ದಕ್ಷಿಣದ ಸಿನಿಮಾ, ಉತ್ತರದ ಸಿನಿಮಾ, ಪ್ರಾದೇಶಿಕ ಸಿನಿಮಾ ಎನ್ನುವ ಬೇಧ ಭಾವ ಇಲ್ಲದೇ ಹೋದರೆ ಮಾತ್ರ ಸಿನಿಮಾ ರಂಗ ಇನ್ನಷ್ಟು ಜನರಿಗೆ ತಲುಪಲು ಸಾಧ್ಯ’ ಎಂದಿದ್ದಾರೆ.
ಕೆಜಿಎಫ್, ಆರ್ಆರ್ಆರ್, ಪುಷ್ಪ ಸಿನಿಮಾಗಳು ಮಾಡಿರುವ ದಾಖಲೆಗಳ ಬಗ್ಗೆ ಹೆಮ್ಮೆ ಇರುವುದಾಗಿ ಹೇಳಿರುವ ನಿರ್ದೇಶಕ ಕರಣ್ ಜೋಹರ್, “ನಾವು ಒಂದೇ ರಂಗದವರು. ನಮ್ಮ ಮಧ್ಯೆ ಸ್ಪರ್ಧೆಯಿಲ್ಲ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೇರಳ: ಸಂವಿಧಾನ ವಿರೋಧಿ ಹೇಳಿಕೆ:ಭಾರೀ ಆಕ್ರೋಶದ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಸಾಜಿ ರಾಜೀನಾಮೆ
ಮುಂಬಯಿಯಲ್ಲಿ ಮುಂದುವರಿದ ವರ್ಷಧಾರೆ; ಭೂಕುಸಿತ-ತಗ್ಗುಪ್ರದೇಶ ಜಲಾವೃತ, ಟ್ರಾಫಿಕ್ ಜಾಮ್
ಗೋವಾ ರಾಜ್ಯಾದ್ಯಂತ ಭಾರಿ ಮಳೆ ; ಜನಜೀವನ ಅಸ್ತವ್ಯಸ್ಥ
ಕೇಂದ್ರ ಸಚಿವ ಸ್ಥಾನಕ್ಕೆ ಮುಖ್ತಾರ್ ಅಬ್ಬಾಸ್ ನಖ್ವಿ ರಾಜೀನಾಮೆ; ಉಪರಾಷ್ಟ್ರಪತಿಯಾಗಿ ಆಯ್ಕೆ?
ಕಾಳಿ ಮಾತೆ ವಿರುದ್ಧ ಹೇಳಿಕೆ:ಟಿಎಂಸಿಯಿಂದ ಮೊಯಿತ್ರಾ ಉಚ್ಛಾಟಿಸಿ: ಮಮತಾಗೆ ಬಿಜೆಪಿ ಗಡುವು
MUST WATCH
ಹೊಸ ಸೇರ್ಪಡೆ
ಮಳೆ ರೆಡ್ ಅಲರ್ಟ್; ದಕ್ಷಿಣ ಕನ್ನಡ, ಉಡುಪಿಯಲ್ಲಿ ಶಾಲಾ-ಕಾಲೇಜುಗಳಿಗೆ ನಾಳೆ ರಜೆ
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ: ಕ್ರಮಕ್ಕೆ ಉಡುಪಿ ಜಿಲ್ಲಾಡಳಿದಿಂದ ದೂರು
ಹೆಣ್ಣುಮಕ್ಕಳಿಗೆ ಉಚಿತವಾಗಿ ಮುಟ್ಟಿನ ಕಪ್ ವಿತರಿಸುವ ಚಿಂತನೆ: ಡಾ.ಕೆ.ಸುಧಾಕರ್
ಲೈಂಗಿಕ ಕ್ರಿಯೆಗೆ ಸಹಕರಿಸದ ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ
ಹೈಕೋರ್ಟ್ ಸೂಚನೆಯಂತೆ ವಿರೂಪಾಪೂರಗಡ್ಡಿ ಹಳೆ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ