ಪುರಾತನ ಸ್ಥಳಗಳ ಮರು ವರ್ಗೀಕರಣಕ್ಕೆ ಕೇಂದ್ರದ ಚಿಂತನೆ : ‘ಇತಿಹಾಸ’ ಮರುವಿಂಗಡಣೆ!
Team Udayavani, Mar 16, 2020, 7:23 AM IST
ಹೊಸದಿಲ್ಲಿ: ಸರಕಾರದ ರಕ್ಷಣೆಯಲ್ಲಿರುವ ದೇಶದ ಪುರಾತನ ಸ್ಥಳಗಳ ಪುನರ್ ವಿಂಗಡಣೆಗೆ ಕೇಂದ್ರ ಸರಕಾರ ಮುಂದಾಗಿದೆ. ಆಯಾ ಸ್ಥಳಗಳ ಮಹತ್ವ ಹಾಗೂ ಐತಿಹಾಸಿಕ ಪ್ರಾಮುಖ್ಯತೆಯನ್ನು ಆಧರಿಸಿ ಈ ವರ್ಗೀಕರಣ ಮಾಡಲಾಗುತ್ತದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಪಟೇಲ್ ತಿಳಿಸಿದ್ದಾರೆ.
1958ರ ಪುರಾತನ ಸ್ಮಾರಕಗಳು ಹಾಗೂ ಪ್ರಾಚ್ಯವಸ್ತು ಸ್ಥಳ ಮತ್ತು ಅವಶೇಷಗಳ ಕಾಯ್ದೆಯ ಪ್ರಕಾರ, ಸರಕಾರದ ಸಂರಕ್ಷಣೆಯಲ್ಲಿರುವ ಐತಿಹಾಸಿಕ ಕಟ್ಟಡಗಳ ಸುತ್ತಲೂ ಸುಮಾರು 100 ಮೀ.ವರೆಗೆ ಯಾವುದೇ ಕಟ್ಟಡಗಳನ್ನು ನಿರ್ಮಿಸಲು ಅವಕಾಶವಿಲ್ಲ. 100ರಿಂದ 200 ಮೀ.ರವರೆಗಿನ ವ್ಯಾಪ್ತಿಯಲ್ಲಿ ಆಗುವ ಯಾವುದೇ ನಿರ್ಮಾಣಗಳ ಮೇಲೆ ಸರಕಾರದ ನಿಯಂತ್ರಣವಿರುತ್ತದೆ.
ಆದರೆ, ಈ ಬಿಗಿ ನಿಯಮಗಳಿಂದಾಗಿ ಕೆಲವು ವರ್ಷಗಳಿಂದ ಈ ಪ್ರಾಂತ್ಯಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ, ನಿಯಮಗಳ ಸಡಿಲಿಕೆಗಾಗಿ, ಕಾಯ್ದೆಗೆ ತಿದ್ದುಪಡುವ ಉದ್ದೇಶದ ವಿಧೇಯಕವೊಂದನ್ನು ಕಳೆದ ಸಂಸತ್ ಅಧಿವೇಶನದಲ್ಲೇ ಮಂಡಿಸಲಾಗಿದ್ದು, ಅದಕ್ಕೆ ಲೋಕಸಭೆ ಒಪ್ಪಿಗೆ ನೀಡಿದೆ. ರಾಜ್ಯಸಭೆಯು ಈ ವಿಧೇಯಕವನ್ನು ಸಂಸತ್ ಸಮಿತಿಯೊಂದರ ಅವಗಾಹನೆಗೆ ಕಳುಹಿಸಿದೆ.
– ಪುರಾತನ ಸ್ಥಳಗಳ ಐತಿಹಾಸಿಕ ಮಹತ್ವದ ಆಧಾರದ ಮೇಲೆ ವಿಂಗಡಿಸಲು ನಿರ್ಧಾರ
– 1958ರ ಪುರಾತನ ಸ್ಮಾರಕಗಳ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರದ ಉದ್ದೇಶ
– ತಿದ್ದುಪಡಿ ವಿಧೇಯಕಕ್ಕೆ ಸಂಸತ್ನ ಕಳೆದ ಅಧಿವೇಶನದಲ್ಲೇ ಲೋಕಸಭೆಯಲ್ಲಿ ಅನುಮೋದನೆ
– ಸದ್ಯಕ್ಕೆ ಸಂಸದೀಯ ಸಮಿತಿಯೊಂದರ ಅವಗಾಹನೆಯಲ್ಲಿರುವ ವಿಧೇಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದಾರಿ ಮಧ್ಯೆ ಹೊತ್ತಿ ಉರಿದ ಟ್ರಕ್… 32 ಲಕ್ಷ ಮೌಲ್ಯದ ಸೊತ್ತು ನಷ್ಟ
Hamida Banu: ಭಾರತದ ಮೊದಲ ಮಹಿಳಾ ಕುಸ್ತಿಪಟು ಹಮೀದಾ ಬಾನುಗೆ ಗೂಗಲ್ ಡೂಡಲ್ ಗೌರವ
Loksabha; ಪ್ರಚಾರಕ್ಕೆ ಸಿಗದ ಹಣಕಾಸು ನೆರವು..: ಟಿಕೆಟ್ ಮರಳಿಸಿದ ಕಾಂಗ್ರೆಸ್ ಅಭ್ಯರ್ಥಿ
Mussoorie: ಭೀಕರ ರಸ್ತೆ ಅಪಘಾತ… 5 ವಿದ್ಯಾರ್ಥಿಗಳ ದುರಂತ ಅಂತ್ಯ, ಓರ್ವಳ ಸ್ಥಿತಿ ಗಂಭೀರ
ಅರವಿಂದ್ ಕೇಜ್ರಿವಾಲ್ಗೆ ಮಧ್ಯಂತರ ಜಾಮೀನು? ಸುಪ್ರೀಂ ಸುಳಿವು
MUST WATCH
ಹೊಸ ಸೇರ್ಪಡೆ
ಗದಗ: ಸಂವಿಧಾನ ಧರ್ಮಗ್ರಂಥ ಎಂದವರು ಮೋದಿ- ಬೊಮ್ಮಾಯಿ
ಚಿನ್ನದ ನಾಡಿನ ಕಲಾವಿದೆ ವಿದ್ಯಾಶ್ರೀ ಪ್ರತಿಭೆ ಅನಾವರಣ-ನೃತ್ಯಗಂಗಾ ಪ್ರದರ್ಶನ
BJP ಕುರುಬ ಸಮುದಾಯಕ್ಕೆ ಒಂದೂ ಟಿಕೆಟ್ ಕೊಟ್ಟಿಲ್ಲ: ಸಿಎಂ ಸಿದ್ದರಾಮಯ್ಯ ಕಿಡಿ
ಅಮಿತಾಭ್ ಟು ಶಾರುಖ್: ಇಂದು ಕೋಟಿ ಕುಳರಾದ ಈ ನಟರ ಮೊದಲ ಸಂಪಾದನೆ ಎಷ್ಟಾಗಿತ್ತು ಗೊತ್ತಾ?
Panaji: ದಾರಿ ಮಧ್ಯೆ ಹೊತ್ತಿ ಉರಿದ ಟ್ರಕ್… 32 ಲಕ್ಷ ಮೌಲ್ಯದ ಸೊತ್ತು ನಷ್ಟ