Goa ಮಹದಾಯಿ ರಕ್ಷಣೆಗಾಗಿ ‘ಹುಲಿ ಯೋಜನೆ’ ಎಂದು ಘೋಷಿಸಿ: ರಾಜೇಂದ್ರ ಕೇರಕರ್
ಕರ್ನಾಟಕದ ಯೋಜನೆಗಳಿಂದ ಮಹದಾಯಿ ಬಿಕ್ಕಟ್ಟಿಗೆ ಸಿಲುಕಿದೆ...
Team Udayavani, Jun 19, 2023, 6:44 PM IST
ಪಣಜಿ: ಮಹದಾಯಿ ರಕ್ಷಣೆಗಾಗಿ ಅಭಯಾರಣ್ಯದ ಕೆಲ ಭಾಗಗಳನ್ನು ಹುಲಿ ಯೋಜನೆ ಎಂದು ಘೋಷಿಸಿದರೆ ಮಹದಾಯಿ ರಕ್ಷಣೆ ಖಚಿತ. ಅಭಯಾರಣ್ಯದಲ್ಲಿ ಹುಲಿಗಳ ಅಸ್ಥಿತ್ವವು ಸಾಬೀತಾಗಿದೆ ಮತ್ತು ಯೋಜನೆಯು ಕರ್ನಾಟಕದ ನೀರಿನ ನಿರ್ವಹಣೆ ಚಟುವಟಿಕೆಗಳನ್ನು ನಿರ್ಬಂಧಿಸುತ್ತದೆ. ಹೀಗಾದಾಗ ಮಾತ್ರ ಮಹದಾಯಿ ರಕ್ಷಣೆ ಸಾಧ್ಯ ಎಂದು ಗೋವಾದ ಪರಿಸರ ಹೋರಾಟಗಾರ ರಾಜೇಂದ್ರ ಕೇರಕರ್ ಹೇಳಿದರು.
ಕ್ರಾಂತಿ ದಿನದ ನಿಮಿತ್ತ ಗೋವಾದ ಮಾಶೆಲ್ ನಲ್ಲಿ ಪತ್ರಕರ್ತರ ಸಂಘ ಆಯೋಜಿಸಿದ್ದ ಮಹದಾಯಿ ಪರಮ ಸತ್ಯ ಕಾರ್ಯಕ್ರಮದಲ್ಲಿ ಪರಿಸರ ಹೋರಾಟಗಾರ ರಾಜೇಂದ್ರ ಕೇರ್ಕರ ಮಾತನಾಡಿದರು. ಮಾಶೆಲ್ನ ಲೋಟಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ರಾಜೇಂದ್ರ ಕೇರ್ಕರ್ ಮಾತನಾಡಿದರು. ಸಹ ಭಾಷಣಕಾರರಾಗಿ ಪತ್ರಕರ್ತ ರಾಜು ನಾಯ್ಕ್, ಪತ್ರಕರ್ತ ಸಂಜಯ್ ಘುಗ್ರೇಟಕರ್ ಉಪಸ್ಥಿತರಿದ್ದರು.
ಪತ್ರಕರ್ತ ರಾಜು ನಾಯ್ಕ ಮಾತನಾಡಿ, ಕರ್ನಾಟಕದ ಕಳಸಾ-ಬಂಡೂರ ಮತ್ತಿತರ ಯೋಜನೆಗಳಿಂದ ಮಹದಾಯಿ ಬಿಕ್ಕಟ್ಟಿಗೆ ಸಿಲುಕಿದೆ. ಕರ್ನಾಟಕದ ಈ ಪ್ರಯತ್ನವನ್ನು ದುರ್ಬಲಗೊಳಿಸಲು ಈ ಪ್ರಶ್ನೆಗೆ ಸಂಪೂರ್ಣ ಅಧ್ಯಯನದ ಅಗತ್ಯವಿದೆ. ಕರ್ನಾಟಕದ ವಕೀಲರು ಮತ್ತು ರಾಜಕಾರಣಿಗಳು ಕಳಸಾ-ಭಂಡೂರ ಮತ್ತು ಇತರ ಸ್ಥಳಗಳಿಗೆ ಅಧ್ಯಯನ ಮಾಡಲು ಮತ್ತು ವೀಕ್ಷಣೆಗಳನ್ನು ದಾಖಲಿಸಲು ಬರುತ್ತಾರೆ. ಮಹದಾಯಿ ನೀರು ಹರಿವನ್ನು ವಿರುದ್ಧ ದಿಕ್ಕಿನಲ್ಲಿ ತಿರುಗಿಸುವುದು ತಪ್ಪು. ಕರ್ನಾಟಕದ ಈ ಕ್ರಮ ಅಸ್ವಾಭಾವಿಕ ಎಂದರು.
ಪತ್ರಕರ್ತ ಸಂಜಯ್ ಘುಗ್ರೆಟ್ಕರ್ ಮಾತನಾಡಿ, ಕರ್ನಾಟಕದ ಅಂದಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ ರವರ ಸರ್ಕಾರವು 1978ರಲ್ಲಿ ಮಹದಾಯಿ ನೀರನ್ನು ಕರ್ನಾಟಕಕ್ಕೆ ಹರಿಸಲು ನಿರ್ಧರಿಸಿತ್ತು. ಅಂದಿನಿಂದ ಕರ್ನಾಟಕದಲ್ಲಿ ಹಲವು ಸರ್ಕಾರಗಳು ಬಂದು ಹೋದವು. ಆದರೆ ಮಹದಾಯಿ ವಿಚಾರದಲ್ಲಿ ಪಾತ್ರ ಬದಲಾಗಿಲ್ಲ.ಆದರೂ ಗೋವಾದಲ್ಲಿ ಸರ್ಕಾರ ತನ್ನದೇ ಆದ ರೀತಿಯಲ್ಲಿ ಹೋರಾಟ ನಡೆಸುತ್ತಿದೆ. ಪರಿಸರವಾದಿಗಳ ಮಾರ್ಗದರ್ಶನದೊಂದಿಗೆ ಹೋರಾಟ ನಡೆಸಿದರೆ ಮಾತ್ರ ಮಹದಾಯಿ ಬಿಕ್ಕಟ್ಟು ಬಗೆಹರಿಯುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
MUST WATCH
ಹೊಸ ಸೇರ್ಪಡೆ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ