ED ಮುಂದೆ ಹಾಜರಾಗಿ; ಕಾನೂನಿನೊಂದಿಗೆ ಆಡಬೇಡಿ: ಕಾರ್ತಿಗೆ ಸುಪ್ರೀಂ
Team Udayavani, Jan 30, 2019, 6:21 AM IST
ಹೊಸದಿಲ್ಲಿ : ಏರ್ಸೆಲ್ ಮ್ಯಾಕ್ಸಿಸ್ ಮತ್ತು ಐಎನ್ಎಕ್ಸ್ ಕೇಸುಗಳಿಗೆ ಸಂಬಂಧಿಸಿ ಮಾರ್ಚ್ 5, 6, 7 ಮತ್ತು 12ರಂದು ವಿಚಾರಣೆಗೆ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್ ಇಂದು ಬುಧವಾರ ಆದೇಶಿಸಿದೆ; ಮಾತ್ರವಲ್ಲ ಕಾನೂನಿನೊಂದಿಗೆ ಆಟವಾಡಕೂಡದೆಂಬ ಖಡಕ್ ಎಚ್ಚರಿಕೆಯನ್ನೂ ನೀಡಿದೆ.
ವಿದೇಶಕ್ಕೆ ಹೋಗುವುದಕ್ಕೆ ಅನುಮತಿ ನೀಡಿರುವಲ್ಲಿನ ಶರತ್ತುಗಳಲ್ಲಿ ಒಂದಾಗಿದ್ದ ಪ್ರಕಾರ 10 ಕೋಟಿ ರೂ.ಗಳನ್ನು ಕೋರ್ಟ್ ರಿಜಿಸ್ಟ್ರಿಯಲ್ಲಿ ಜಮೆ ಮಾಡುವಂತೆಯೂ ಸುಪ್ರೀಂ ಕೋರ್ಟ್, ಕಾರ್ತಿ ಚಿದಂಬರಂ ಗೆ ಅಪ್ಪಣೆ ಮಾಡಿದೆ.
ತನಗೆ ಫೆ.21ರಿಂದ 28ರ ತನಕ ಫ್ರಾನ್ಸಿಗೆ ಹೋಗುವುದಕ್ಕೆ ಅನುಮತಿ ನೀಡಬೇಕೆಂದು ಕೋರಿ ಕಾರ್ತಿ, ಕಳೆದ ವರ್ಷ ನವೆಂಬರ್ನಲ್ಲಿ ಕೋರ್ಟಿಗೆ ಮನವಿ ಮಾಡಿಕೊಂಡಿದ್ದರು.
“ನೀವು ಎಲ್ಲಿಗೆ ಬೇಕಾದರೂ ಹೋಗಬಹುದು; ಏನು ಬೇಕಾದರೂ ಮಾಡಬಹುದು. ಆದರೆ ಕಾನೂನಿನೊಂದಿಗೆ ಮಾತ್ರ ಆಟವಾಡಕೂಡದು. ವಿಚಾರಣೆಗೆ ನಿಮ್ಮಿಂದ ಸಹಕಾರ ಸಿಗುತ್ತಿಲ್ಲ ಎಂಬ ಬಗ್ಗೆ ಒಂದು ಬಿಂದುವಿನಷ್ಟು ಸಂದೇಹ ನಮಗೆ ಬಂದರೂ ನಾವು ನಿಮ್ಮನ್ನು ಕಟುವಾಗಿ ದಂಡಿಸುವೆವು’ ಎಂದು ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ, ಕಾರ್ತಿ ಚಿದಂಬರಂ ಗೆ ಖಡಕ್ ಎಚ್ಚರಿಕೆ ನೀಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!