ಲಡಾಖ್ ಆಯ್ತು ಈಗ ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಗೆ ಸೇನಾ ವರಿಷ್ಠ ನರಾವಣೆ ಭೇಟಿ
ಹೆಲಿಕಾಪ್ಟರ್ ನಲ್ಲಿ ಟೈಗರ್ ಡಿವಿಷನ್ ಗೆ ಭೇಟಿ ನೀಡಿ ಭದ್ರತೆಯ ಹಾಗೂ ಸೇನಾ ಕಾರ್ಯಾಚರಣೆಯ ಸಿದ್ಧತೆಗಳ ಪರಿಶೀಲನೆ
Team Udayavani, Jul 13, 2020, 5:47 PM IST
ನವದೆಹಲಿ:ಭಾರತ, ಚೀನಾ ನಡುವಿನ ಲಡಾಖ್ ಗಡಿ ಪ್ರದೇಶದ ವಿವಾದ ತಣ್ಣಗಾಗುತ್ತಿದ್ದರೆ, ಮತ್ತೊಂದೆಡೆ ಭಾರತದ ಸೇನಾ ಮುಖ್ಯಸ್ಥ ಎಂಎಂ ನರಾವಣೆ ಅವರು ಸೋಮವಾರ ಭಾರತ್- ಪಾಕ್ ನ ಸುಮಾರು 198 ಕಿಲೋ ಮೀಟರ್ ದೂರದ ಅಂತರಾಷ್ಟ್ರೀಯ ಗಡಿ ಪ್ರದೇಶಕ್ಕೆ ಭೇಟಿ ನೀಡಿ ಭದ್ರತೆಯನ್ನು ಪರಿಶೀಲಸಿರುವುದಾಗಿ ವರದಿ ತಿಳಿಸಿದೆ.
ಸೇನಾ ವರಿಷ್ಠ ನರಾವಣೆ ಅವರು ಮೊದಲು ಜಮ್ಮು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ನಂತರ ಹೆಲಿಕಾಪ್ಟರ್ ನಲ್ಲಿ ಟೈಗರ್ ಡಿವಿಷನ್ ಗೆ ಭೇಟಿ ನೀಡಿ ಭದ್ರತೆಯ ಹಾಗೂ ಸೇನಾ ಕಾರ್ಯಾಚರಣೆಯ ಸಿದ್ಧತೆಗಳ ಪರಿಶೀಲನೆ ನಡೆಸಿದ್ದರು ಎಂದು ಹಿರಿಯ ಸೇನಾ ಅಧಿಕಾರಿ ತಿಳಿಸಿದ್ದಾರೆ.
ಭಾರತದ ಜಮ್ಮು ಪ್ರದೇಶದ ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್ ಎಫ್ ಹಾಗೂ ಪಾಕಿಸ್ತಾನ ಕಡೆ ಪಾಕಿಸ್ತಾನಿ ರೇಂಜರ್ಸ್ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಆರು ಸೇತುವೆಗಳನ್ನು ನಿರ್ಮಿಸಿತ್ತು. ಇದರಲ್ಲಿ ಕಥುವಾ ಜಿಲ್ಲೆಯ ಹೀರಾನಗರದ ಟರ್ರಾನ್ ನಲ್ಲಿ ಎರಡು, ಅಕ್ನೂರ್-ಪಲ್ಲಾನ್ ವಾಲಾ ಸೆಕ್ಟರ್ ನಲ್ಲಿ ನಾಲ್ಕು ಸೇತುವೆಯನ್ನು ಭಾರತ ನಿರ್ಮಿಸಿದ್ದು, ರಾಜ್ ನಾಥ್ ಸಿಂಗ್ ಉದ್ಘಾಟಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ