ಪ್ರವಾಹಕ್ಕೆ ಮನೆ ಛಾವಣಿಯಲ್ಲಿ ಸಿಲುಕಿದ್ದ ಮೇಕೆಗಳನ್ನು ರಕ್ಷಿಸಿದ ಯೋಧರು
Team Udayavani, Aug 18, 2019, 10:28 PM IST
ನವಾನ್ ಶಹರ್: ಪಂಜಾಬ್ ರಾಜ್ಯದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಇದರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎನ್.ಡಿ.ಆರ್.ಎಫ್. ತಂಡ ಮತ್ತು ಸೇನಾ ಜವಾನರು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್ ಸಿಂಗ್ ಅವರ ಹುಟ್ಟೂರಾಗಿರುವ ನವಾನ್ ಶಹರ್ ಸಹ ಪ್ರವಾಹ ಪೀಡಿತವಾಗಿದೆ. ಇಲ್ಲಿನ ಜಲ್ಲಾ ಮಾಜ್ರಾ ಗ್ರಾಮದಲ್ಲಿ ಮನೆಯೊಂದರ ಸುತ್ತ ಪ್ರವಾಹದ ನೀರು ತುಂಬಿಕೊಂಡಿದ್ದರಿಂದ ಆ ಪುಟ್ಟ ಮನೆಯ ಮಾಡಿನ ಮೇಲೆ ಆಶ್ರಯ ಪಡೆದಿದ್ದ ಮೇಕೆಗಳನ್ನು ಮತ್ತು ಇಬ್ಬರು ವ್ಯಕ್ತಿಗಳನ್ನು ಸೇನಾ ತಂಡ ರಕ್ಷಿಸಿ ದೋಣಿಯಲ್ಲಿ ಕರೆತರುತ್ತಿರುವ ವಿಡೀಯೋ ಇಲ್ಲಿದೆ.
ಚಿಕ್ಕದಾಗಿರುವ ಆ ಮನೆಯ ಹತ್ತಿರ ದೋಣಿಯಲ್ಲಿ ತೆರಳುವ ಜವಾನರು ಬಳಿಕ ಮಾಡಿನ ಮೇಲೆ ಆಶ್ರಯ ಪಡೆದಿದ್ದ ಕೆಲವು ಮೇಕೆಗಳನ್ನು ಒಂದೊಂದಾಗಿ ದೋಣಿಗೆ ತುಂಬಿಸಿಕೊಳ್ಳುವ ದೃಶ್ಯ ಈ ವಿಡಿಯೋದಲ್ಲಿ ಸೆರೆಯಾಗಿದೆ.
#WATCH Punjab: Army team rescues goats from the roof of a submerged house in flood-affected village Jalla Majra in Nawanshahr pic.twitter.com/y28xQPUXDf
— ANI (@ANI) August 18, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!