ರಾಜಕೀಯ ವಾಗ್ಯುದ್ಧಕ್ಕೆ ಸೇನೆಯನ್ನು ಎಳೆಯಬೇಡಿ
Team Udayavani, Dec 22, 2018, 8:15 AM IST
ಹೊಸದಿಲ್ಲಿ : ರಫೇಲ್ ಒಪ್ಪಂದದ ವಿಚಾರದಲ್ಲಿ ವಾಯುಪಡೆ ಮುಖ್ಯಸ್ಥ ಬಿ.ಎಸ್.ಧನೋವಾ ಸುಳ್ಳು ಹೇಳುತ್ತಿದ್ದಾರೆ ಎಂದು ಮಾಜಿ ಸಚಿವ ವೀರಪ್ಪ ಮೊಯ್ಲಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ರಾಜಕೀಯ ಕೆಸರೆರಚಾಟಕ್ಕೆ ಸೇನೆಯನ್ನು ಎಳೆಯಬೇಡಿ. ಪ್ರಬುದ್ಧರಾಗಿ ವರ್ತಿಸಿ ಎಂದು ಕಾಂಗ್ರೆಸ್ಗೆ ತಾಕೀತು ಮಾಡಿದ್ದಾರೆ. ದಶಕಗಳವರೆಗೆ ಈ ದೇಶವನ್ನು ಆಳಿದ ಪಕ್ಷ ಇನ್ನೂ ಪ್ರಬುದ್ಧವಾಗಬೇಕಿದೆ ಎಂದು ಜೇಟ್ಲಿ ತಮ್ಮ ಬ್ಲಾಗ್ನಲ್ಲಿ ಲೇಖನ ಬರೆದಿದ್ದಾರೆ. ರಫೇಲ್ ವಿಚಾರಕ್ಕೆ ಸಂಬಂಧಿಸಿ ಭಾರತೀಯ ವಾಯುಪಡೆ ಮತ್ತು ಅದರ ಮುಖ್ಯಸ್ಥರು ಮಾತನಾಡಲು ಅರ್ಹರಾಗಿರುತ್ತಾರೆ. ಯುಪಿಎ ಅಧಿಕಾರದಲ್ಲಿದ್ದಾಗ ರಫೇಲ್ ಆಯ್ಕೆಯಲ್ಲಿ ವಾಯುಪಡೆಯೂ ಭಾಗವಹಿಸಿತ್ತು. ಅದೇ ರೀತಿ ಎನ್ಡಿಎ ಅಧಿಕಾರದಲ್ಲಿದ್ದಾಲೂ ಸೇನೆ ಭಾಗವಹಿಸಿದೆೆ ಎಂದಿದ್ದಾರೆ.
ರಿಲಯನ್ಸ್ ಅನ್ನು ಕೈಬಿಡುತ್ತೇವೆ: ನಾವು ಅಧಿಕಾರಕ್ಕೆ ಬಂದರೆ ರಫೇಲ್ ಡೀಲ್ನಿಂದ ರಿಲಯನ್ಸ್ ಡಿಫೆನ್ಸ್ ಅನ್ನು ಕೈಬಿಟ್ಟು, ಎಚ್ಎಎಲ್ ಅನ್ನು ಆಫ್ಸೆಟ್ ಪಾರ್ಟರ್ ಆಗಿ ನೇಮಿಸುತ್ತೇವೆ ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!