ಬಿಜೆಪಿ ಅಧಿಕಾರ ಗ್ರಹಣದ ವೇದಿಕೆ: ಮಾಜಿ ಸಿಎಂ ಅಪಾಂಗ್ ರಾಜೀನಾಮೆ
Team Udayavani, Jan 16, 2019, 10:13 AM IST
ಹೊಸದಿಲ್ಲಿ : ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಗೆಗಾಂಗ್ ಅಪಾಂಗ್ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
‘ಬಿಜೆಪಿಯ ಹಾಲಿ ನಾಯಕತ್ವವು ಅಧಿಕಾರ ಹಿಡಿಯುವ ಒಂದು ವೇದಿಕೆಯಾಗಿ ಬಿಟ್ಟಿದೆ; ಮಾಜಿ ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ತತ್ವಾದರ್ಶಗಳನ್ನು ಬಿಜೆಪಿ ಪಾಲಿಸುತ್ತಿಲ್ಲ’ ಎಂದು ಆರೋಪಿಸಿರುವ ಅಪಾಂಗ್ ತಮ್ಮ ರಾಜೀನಾಮೆ ಪತ್ರವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಗೆ ಕಳುಹಿಸಿದ್ದಾರೆ.
‘ದಿವಂಗತ ವಾಜಪೇಯಿ ಅವರು ಪ್ರಾಯಶಃ ನಮ್ಮ ದೇಶ ನೀಡಿರುವ ಓರ್ವ ಅತೀ ದೊಡ್ಡ ಪ್ರಜಾಪ್ರಭುತ್ವವಾದಿ. ಅವರು ಅನೇಕ ಬಾರಿ ನನಗೆ ರಾಜ ಧರ್ಮದ ಚಿನ್ನದ ನಿಯಮಗಳನ್ನು ಬೋಧಿಸಿದ್ದಾರೆ. ಇಂದಿಗೂ ವಾಜಪೇಯಿ ಜೀ ಅವರ ತತ್ವ ಸಿದ್ಧಾಂತಗಳ ಓರ್ವ ವಿದ್ಯಾರ್ಥಿಯಾಗಿರುವ ನಾನು ಅವರ ರಾಜಧರ್ಮ ವನ್ನು ಕಾಯಾ, ವಾಚಾ, ಮನಸಾ ಪಾಲಿಸಲು ಯತ್ನಿಸುತ್ತಿದ್ದೇನೆ’ ಎಂದು ಅಪಾಂಗ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
“ಇಂದು ದುರದೃಷ್ಟವಶಾತ್ ಬಿಜೆಪಿ ಅಧಿಕಾರ ಗ್ರಹಣದ ಒಂದು ವೇದಿಕೆಯಾಗಿ ಬಿಟ್ಟಿದೆ. ಇದರ ನಾಯಕತ್ವ ಪ್ರಜಾಸತ್ತಾತ್ಮಕ ನಿರ್ಧಾರಗಳ ವಿಕೇಂದ್ರೀಕರಣವನ್ನು ದ್ವೇಷಿಸುತ್ತದೆ; ಅದೀಗ ಕೇವಲ ಅಧಿಕಾರವನ್ನು ವಶಪಡಿಸಿಕೊಳ್ಳುವುದರಲ್ಲಿ ಮಾತ್ರವೇ ಆಸಕ್ತವಾಗಿದೆ’ ಎಂದು ಅಪಾಂಗ್ ಹೇಳಿದ್ದಾರೆ.
‘2014ರ ಅರುಣಾಚಲ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸದಿದ್ದರೂ ಪಕ್ಷದ ನಾಯಕತ್ವ ಅಧಿಕಾರ ಗ್ರಹಣಕ್ಕೆ ಅತ್ಯಂತ ಕೊಳಕು ಮಾರ್ಗಗಳನ್ನು ಅನುಸರಿಸಿ ದಿವಂಗತ ಕಾಲಿಖೋ ಪುಲ್ ಅವರನ್ನು ಸಿಎಂ ಆಗಿ ಕೂರಿಸಿತು’ ಎಂದು ಅಪಾಂಗ್ ಪತ್ರದಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
MUST WATCH
ಹೊಸ ಸೇರ್ಪಡೆ
Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!
ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ
Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ
Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು