Assam; ಶಾ ಸಮ್ಮುಖದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಪ್ರತ್ಯೇಕತಾವಾದಿ ಉಲ್ಫಾ
ಉಗ್ರಗಾಮಿ ಸಂಘಟನೆಗಳ 8,756 ಸದಸ್ಯರು ಮುಖ್ಯವಾಹಿನಿಗೆ
Team Udayavani, Dec 29, 2023, 6:30 PM IST
ದಿಸ್ಪುರ್ : ಅಸ್ಸಾಂನ ಅತ್ಯಂತ ಹಳೆಯ ಪ್ರತ್ಯೇಕತಾವಾದಿ ನಿಷೇಧಿತ ಗುಂಪು ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ULFA) ಪರ ಮಾತುಕತೆಯ ಬಣವು ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರ ಸಮ್ಮುಖದಲ್ಲಿ ಕೇಂದ್ರ ಮತ್ತು ಅಸ್ಸಾಂ ಸರಕಾರದೊಂದಿಗೆ ತ್ರಿಪಕ್ಷೀಯ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿತು.
ಶಾಂತಿ ಒಪ್ಪಂದಗಳಿಗೆ ಸಹಿ ಹಾಕಿದ ನಂತರ ಅಮಿತ್ ಶಾ ಮಾತನಾಡಿ ” ದೀರ್ಘಕಾಲದಿಂದ ಅಸ್ಸಾಂ ಮತ್ತು ಈಶಾನ್ಯ ಹಿಂಸಾಚಾರವನ್ನು ಎದುರಿಸುತ್ತಿತ್ತು.ಇಂದು ಅಸ್ಸಾಂನ ಭವಿಷ್ಯದ ಉಜ್ವಲ ದಿನವಾಗಿರುವುದು ಸಂತೋಷದ ವಿಷಯವಾಗಿದೆ. ಉಲ್ಫಾ ಸಹಿ ಹಾಕಿರುವುದು ಇಡೀ ಈಶಾನ್ಯಕ್ಕೆ ಮತ್ತು ವಿಶೇಷವಾಗಿ ಅಸ್ಸಾಂಗೆ ಶಾಂತಿಯ ಹೊಸ ಅವಧಿಯ ಆರಂಭವನ್ನು ಸೂಚಿಸುತ್ತದೆ.
ಬಂಡುಕೋರರ ಗುಂಪು ಒಳಗೊಂಡ ಹಿಂಸಾಚಾರದಿಂದ ರಾಜ್ಯವು ದೀರ್ಘಕಾಲದಿಂದ ಬಳಲುತ್ತಿತ್ತು, 1979 ರಿಂದ ಇಂತಹ ಹಿಂಸಾಚಾರದಲ್ಲಿ 10,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎಂದು ಅಮಿತ್ ಶಾ ಹೇಳಿದರು.
“ಭಾರತ ಸರಕಾರದ ಮೇಲೆ ನೀವು ಇಟ್ಟುಕೊಂಡಿರುವ ನಂಬಿಕೆ, ಗೃಹ ಸಚಿವಾಲಯದ ಕಡೆಯಿಂದ, ನೀವು ಕೇಳದೆಯೇ ಎಲ್ಲವನ್ನೂ ಪೂರೈಸಲು ಸಮಯಕ್ಕೆ ಅನುಗುಣವಾಗಿ ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದು ನಾನು ಉಲ್ಫಾ ಪ್ರತಿನಿಧಿಗಳಿಗೆ ಭರವಸೆ ನೀಡಲು ಬಯಸುತ್ತೇನೆ. ಗೃಹ ಸಚಿವಾಲಯದ ಅಡಿಯಲ್ಲಿ ಸಮಿತಿಯನ್ನು ರಚಿಸಲಾಗುವುದು, ಇದು ಜ್ಞಾಪಕ ಪತ್ರದ ಅಡಿಯಲ್ಲಿ ಒಪ್ಪಂದಗಳನ್ನು ಪೂರೈಸಲು ಅಸ್ಸಾಂ ಸರಕಾರದೊಂದಿಗೆ ಕೆಲಸ ಮಾಡುತ್ತದೆ ಎಂದರು.
ಹಿಮಂತ ಬಿಸ್ವಾ ಶರ್ಮ ಅವರು ಮಾತನಾಡಿ ಅಸ್ಸಾಂಗೆ ಐತಿಹಾಸಿಕ ದಿನ. ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ಸುಮಾರು ಉಗ್ರಗಾಮಿ ಸಂಘಟನೆಗಳ 8,756 ಸದಸ್ಯರು ಮುಖ್ಯವಾಹಿನಿಗೆ ಸೇರಿದ್ದಾರೆ ಎಂದರು.
ಈ ಗುಂಪನ್ನು ಉಗ್ರ ಸಂಘಟನೆ ಎಂದು ಹೆಸರಿಸಿ 1990 ರಿಂದ ನಿಷೇಧಿಸಲಾಗಿತ್ತು. 2011 ರಲ್ಲಿ, ಗುಂಪು ಕೇಂದ್ರ ಸರಕಾರ ಮತ್ತು ಅಸ್ಸಾಂ ಸರಕಾರದೊಂದಿಗೆ ಕಾರ್ಯಾಚರಣೆಗಳ ಅಮಾನತು (SoO) ಗಾಗಿ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ