ಬೆದರಿಕೆ ಹಾಕಿರುವ ಆರೋಪ
Team Udayavani, Mar 13, 2019, 12:30 AM IST
ಹೊಸದಿಲ್ಲಿ: ಅಗಸ್ಟಾ ವೆಸ್ಟ್ಲ್ಯಾಂಡ್ ಕಾಪ್ಟರ್ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಅವರು ದಿಲ್ಲಿ ಕೋರ್ಟ್ ಮುಂದೆ ತಮಗೆ ಬೆದರಿಕೆಯಿರುವುದಾಗಿ ಹೇಳಿಕೊಂಡಿ ದ್ದಾರೆ. ಮಂಗಳವಾರ ವಿಚಾರಣೆಗೆ ಹಾಜರಾದ ಅವರು, “ನನ್ನನ್ನು ಸಿಬಿಐ ಮಾಜಿ ನಿರ್ದೇಶಕ ರಾಕೇಶ್ ಅಸ್ತಾನಾ ಅವರು ದುಬೈನಲ್ಲಿ ಭೇಟಿಯಾಗಿದ್ದರು. ನಾವು ಹೇಳಿದಂತೆ ಕೇಳದಿದ್ದರೆ ನಿನ್ನ ಜೀವನವನ್ನು ನರಕವಾಗಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು’ ಎಂದು ಆರೋಪಿಸಿದ್ದಾರೆ. ಅಲ್ಲದೆ, ತಮ್ಮನ್ನು ಜೈಲಿನಲ್ಲಿ ಗ್ಯಾಂಗ್ಸ್ಟರ್ ಛೋಟಾ ರಾಜನ್ ಪಕ್ಕದ ಕೊಠಡಿಯಲ್ಲಿ ಇರಿಸಲಾಗಿದೆ. ಜತೆಗೆ, 16-17 ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನು ಇರಿಸಿರುವಲ್ಲೇ ನನ್ನನ್ನೂ ಇರಿಸಲಾಗಿದೆ. ನಾನು ಅಂಥ ತಪ್ಪೇನು ಮಾಡಿದ್ದೇನೆ ಎಂದೂ ಪ್ರಶ್ನಿಸಿದ್ದಾರೆ. ಇದೇ ವೇಳೆ, ಮೈಕೆಲ್ನನ್ನು ತಿಹಾರ್ ಜೈಲಿನಲ್ಲಿ ವಿಚಾರಣೆ ನಡೆಸಲು ಇ.ಡಿ.ಗೆ ಕೋರ್ಟ್ ಅನುಮತಿ ನೀಡಿದೆ.