ಜಪಾನ್ ಸಮರಾಭ್ಯಾಸಕ್ಕೆ ಅವನಿ ! ದೇಶದ ನಾರಿಶಕ್ತಿಗೆ ಮತ್ತೂಂದು ಗರಿ
ಯಾರಿವರು ಅವನಿ ಚತುರ್ವೇದಿ?
Team Udayavani, Jan 8, 2023, 7:37 AM IST
ಜೋಧಪುರ: ದೇಶದ ನಾರಿಶಕ್ತಿಯ ಮುಡಿಗೆ ಮತ್ತೂಂದು ಕಿರೀಟ ತೊಡಿಸುವ ಕಾಲ ಹತ್ತಿರ ಬಂದಿದೆ. ಇದೇ ಮೊದಲ ಬಾರಿಗೆ ವಿದೇಶದಲ್ಲಿ ನಡೆಯುವ ಸಮರಾಭ್ಯಾಸದಲ್ಲಿ ಭಾರತದ ಮಹಿಳಾ ಫೈಟರ್ ಭಾಗಿಯಾಗಲಿದ್ದಾರೆ! ದೇಶದ ಮೊದಲ ಯುದ್ಧ ವಿಮಾನ ಫೈಟರ್ ಫೈಲಟ್ ಎಂಬ ಖ್ಯಾತಿಯ ಅವನಿ ಚತುರ್ವೇದಿ ಜಪಾನ್ ನಲ್ಲಿ ನಡೆಯಲಿರುವ “ವೀರ್ ಗಾರ್ಡಿಯನ್ 2023′ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ.
ಜ. 16ರಿಂದ 26ರ ವರೆಗೆ ಈ ಏರಿಯಲ್ ವಾರ್ಗೇಮ್ ನಡೆಯಲಿದೆ. ಸ್ಕ್ವಾಡ್ರನ್ ಲೀಡರ್ ಆಗಿರುವ ಅವನಿ ಸುಖೋಯ್ 30ಎಂಕೆಐನ ಪೈಲಟ್ ಆಗಿದ್ದಾರೆ.
ಈ ವಾರ್ಗೇಮ್ನಲ್ಲಿ ಭಾರತದ ನಾಲ್ಕು ಸುಖೋಯ್ 30 ಎಂಕೆಐ, ಎರಡು ಸಿ-17 ಗ್ಲೋಬ್ಮಾಸ್ಟರ್ ಮತ್ತು ಒಂದು ಐಎಲ್-78 ಟ್ಯಾಂಕರ್ ಭಾಗಿಯಾಗಲಿವೆ.
ಭಾರತದಲ್ಲಿ ನಡೆಯುವ ಸಮರಾಭ್ಯಾಸ ಗಳಲ್ಲಿ ವಿದೇಶಿ ಮಹಿಳಾ ಫೈಟರ್ ಪೈಲಟ್ಗಳು ಭಾಗಿಯಾಗುತ್ತಿರುತ್ತಾರೆ. ಆದರೆ ಭಾರತದ ಕಡೆಯಿಂದ ಇದೇ ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ಮಹಿಳಾ ಫೈಟರ್ ಪೈಲಟ್ ಒಬ್ಬರು ಭಾಗಿಯಾಗುತ್ತಿದ್ದಾರೆ ಎಂಬುದು ವಿಶೇಷ.
ಜಪಾನ್ನ ಒಮಿತಾಮಾ ಮತ್ತು ಸಯೇಮಾ ಏರ್ಬೇಸ್ನ ಸುತ್ತಮುತ್ತ ಈ ಸಮರಾಭ್ಯಾಸ ನಡೆಯಲಿದೆ. ಇದರಲ್ಲಿ ಅವನಿ ಅವರು ಸುಖೊಯ್ ಯುದ್ಧ ವಿಮಾನ ಚಲಾಯಿಸುತ್ತ ಆಗಸದಲ್ಲಿ ತಮ್ಮ ಕೈಚಳಕ ತೋರಲಿದ್ದಾರೆ.
ಯಾರಿವರು ಅವನಿ ಚತುರ್ವೇದಿ?
ಅವನಿ ಚತುರ್ವೇದಿ ಮೂಲತಃ ಮಧ್ಯಪ್ರದೇಶದ ರೇವಾ ಜಿಲ್ಲೆಯವರು. ಇವರ ಸಹೋದರ ಕೂಡ ಸೇನೆಯಲ್ಲೇ ಇದ್ದಾರೆ. 1994ರಲ್ಲಿ ಜನಿಸಿದ ಅವನಿ ಚೆಸ್ ಮತ್ತು ಟೇಬಲ್ ಟೆನ್ನಿಸ್ ಪ್ರಿಯೆ. ಬಿಇ ವಿದ್ಯಾಭ್ಯಾಸ ಮುಗಿಸಿ, ಹೈದರಾಬಾದ್ನ ಏರ್ಫೋರ್ಸ್ ಅಕಾಡೆಮಿಯಲ್ಲಿ ತರಬೇತಿ ಮುಗಿಸಿದ್ದಾರೆ. 2016ರಲ್ಲಿ ವಾಯುಪಡೆಗೆ ಮೊದಲ ಬಾರಿಗೆ ಸೇರಿದ ಮೂವರು ಮಹಿಳೆಯರ ಪೈಕಿ ಒಬ್ಬರು.
ಜಪಾನ್ ಮತ್ತು ಭಾರತ ಮಾತ್ರ ಭಾಗಿ
2022ರ ಸೆ. 8ರಂದು ಜಪಾನ್ನ ಟೋಕಿಯೋದಲ್ಲಿ ಉಭಯ ದೇಶಗಳ ವಿದೇಶಾಂಗ-ರಕ್ಷಣ ಸಚಿವರ ನಡುವಿನ ಮಾತುಕತೆಯಲ್ಲಿ ರಕ್ಷಣಾತ್ಮಕ ಸಹಭಾಗಿತ್ವದ ಬಗ್ಗೆ ಒಪ್ಪಂದವಾಗಿತ್ತು. ಎರಡು ದೇಶಗಳು ಪರಸ್ಪರ ಶಸ್ತ್ರಾಭ್ಯಾಸ ನಡೆಸುವ ಬಗ್ಗೆಯೂ ತೀರ್ಮಾನವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಸಮರಾಭ್ಯಾಸ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
MUST WATCH
ಹೊಸ ಸೇರ್ಪಡೆ
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್