Ayodhya; ಹೋರಾಟ, ತಪಸ್ಸಿನಿಂದ ರಾಮ ಮಂದಿರ ನಿರ್ಮಾಣ: ಕರಸೇವಕ ಮೊಹಮ್ಮದ್
Team Udayavani, Jan 8, 2024, 6:25 AM IST
ಲಕ್ನೋ: ಅಯೋಧ್ಯೆಯಿಂದ ತಮಗಾಗಿ ಬಂದ ರಾಮನ ಅಕ್ಷತೆ, ರಾಮಮಂದಿರ ಫೋಟೋ ಮತ್ತು ಪ್ರತಿಷ್ಠಾಪನೆಯ ಆಮಂತ್ರಣ ಪತ್ರ ಕಂಡು ಕರಸೇವಕರಾದ 70 ವರ್ಷದ ಮೊಹಮ್ಮದ್ ಹಬೀಬ್ ಭಾವುಕರಾಗಿದ್ದಾರೆ. “ಕರಸೇವಕರೊಂದಿಗೆ 1992ರ ಡಿ.2ರಂದು ಅಯೋಧ್ಯೆಗೆ ತೆರಳಿದ್ದೆ. ಅಲ್ಲಿಯೇ 4-5 ದಿನಗಳು ತಂಗಿದ್ದೆ’ ಎಂದು ಉತ್ತರ ಪ್ರದೇಶದ ಮಿರ್ಜಾಪುರ ಹಬೀಬ್ ಹೇಳುತ್ತಾರೆ.
“ಇಷ್ಟು ದಿನಗಳ ಹೋರಾಟ ಮತ್ತು ತಪಸ್ಸಿನ ಫಲವಾಗಿ ಇಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಾಗಿದೆ. ಇದರಿಂದ ತುಂಬ ಸಂತೋಷವಾ ಗುತ್ತಿದೆ. ಶ್ರೀರಾಮ ನಮ್ಮ ಪೂರ್ವಜ. ನಮ್ಮ ಪೂರ್ವ ಜನರನ್ನು ನೆನೆಯುವುದೇ ಭಾರತೀಯತೆ’ ಎಂದು ಹಬೀಬ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಂದೆಡೆ, ವಾರಾಣಸಿಯಲ್ಲಿ ಮುಸ್ಲಿಂ ಮಹಿಳಾ ಫೌಂಡೇಶನ್ ನಿರ್ವಹಿ ಸುತ್ತಿರುವ ನಜ್ನಿàನ್ ಅನ್ಸಾರಿ, “ಅಯೋಧ್ಯೆ ಯಿಂದ ರಾಮ ಜ್ಯೋತಿಯನ್ನು ತಂದು, ಅವುಗಳನ್ನು ವಾರಾಣಸಿಯ 400-500 ಹಿಂದೂ ಮತ್ತು ಮುಸ್ಲಿಂ ಮನೆಗಳಿಗೆ ಹಂಚುವ ಯೋಜನೆ ಹಮ್ಮಿಕೊಂಡಿದ್ದೇವೆ’ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ