ಬಿಹಾರ, ಜಾರ್ಖಂಡ್ ಸಿಡಿಲಿಗೆ 23 ಬಲಿ
Team Udayavani, Jul 25, 2019, 5:00 AM IST
ಹೊಸದಿಲ್ಲಿ: ಬಿಹಾರ, ಜಾರ್ಖಂಡ್ನಲ್ಲಿ ಮಳೆ, ಪ್ರವಾಹ ಸ್ಥಿತಿ ಮುಂದುವರಿದಿದ್ದು, ಬುಧವಾರ ಸಿಡಿಲಿಗೆ 23 ಮಂದಿ ಬಲಿಯಾಗಿದ್ದಾರೆ. ಬಿಹಾರದ 3 ಜಿಲ್ಲೆಗಳಲ್ಲಿ 13 ಮಂದಿ, ಜಾರ್ಖಂಡ್ನ 3 ಜಿಲ್ಲೆಗಳಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಸ್ಸಾಂನಲ್ಲಿ ಪ್ರವಾಹ ಸ್ಥಿತಿ ಮುಂದುವರಿದಿದ್ದು, ಮಳೆ ಹಾಗೂ ನೆರೆ ಸಂಬಂಧಿ ಘಟನೆಗಳಿಗೆ ಬಲಿಯಾದವರ ಸಂಖ್ಯೆ 74ಕ್ಕೇರಿಕೆಯಾಗಿದೆ. 38 ಲಕ್ಷ ಮಂದಿ ನಿರ್ವಸಿತರಾಗಿದ್ದಾರೆ.
ಮುಂಬಯಿ; ಭಾರೀ ಮಳೆ: ಈ ಮಧ್ಯೆ, ಕೆಲವು ದಿನಗಳ ವಿರಾಮದ ಬಳಿಕ ಬುಧವಾರದಿಂದ ಮತ್ತೆ ಮುಂಬಯಿಯಲ್ಲಿ ವರುಣನ ಅಬ್ಬರ ಆರಂಭವಾಗಿದೆ. ಭಾರೀ ಮಳೆಯಿಂದಾಗಿ ಸಂಚಾರ, ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ತಲೆದೋರಿದೆ.