ಜ| ರಾವತ್ ಜತೆ ಜಗಳ ಬೇಡ: ಜಮ್ಮು ಶಿಕ್ಷಣ ಸಚಿವರಿಗೆ ಬಿಜೆಪಿ
Team Udayavani, Jan 15, 2018, 11:03 AM IST
ಜಮ್ಮು : ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಜತೆಗೆ ಅನಗತ್ಯವಾಗಿ ವಿವಾದಾತ್ಮಕ ವಾಕ್ ಸಮರ ನಡೆಸಬೇಡಿ’ ಎಂದು ಬಿಜೆಪಿ ಇಂದು ಜಮ್ಮು ಕಾಶ್ಮೀರದ ಶಿಕ್ಷಣ ಸಚಿವ ಅಲ್ತಾಫ್ ಅಹ್ಮದ್ ಬುಖಾರಿ ಅವರಿಗೆ ಕಿವಿಮಾತು ಹೇಳಿದೆ.
ಜನರಲ್ ರಾವತ್ ಅವರು ಕಳೆದ ಶುಕ್ರವಾರ ಸಾಮಾಜಿಕ ಜಾಲ ತಾಣದಲ್ಲಿ, “ಜಮ್ಮು ಕಾಶ್ಮೀರದಲ್ಲಿನ ಸರಕಾರಿ ಶಾಲೆಗಳು ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿಗಳನ್ನು ನೀಡುತ್ತಿರುವುದರ ಪರಿಣಾಮವಾಗಿ ಉಗ್ರರಿಂದ ವಿದ್ಯಾರ್ಥಿಗಳ ಬುದ್ಧಿಪಲ್ಲಟ ಅಭಿಯಾನ ಎಗ್ಗಿಲ್ಲದೆ ಸಾಗುವಂತಾಗಿದೆ’ ಎಂದು ಟೀಕಿಸಿದ್ದರು.
ಮಾತ್ರವಲ್ಲದೆ ರಾಜ್ಯದಲ್ಲಿನ ಮಸೀದಿಗಳು ಮತ್ತು ಮದ್ರಸಗಳನ್ನು ನಿಯಂತ್ರಿಸುವುದು ಒಳ್ಳೆಯದು ಎಂದಿದ್ದರಲ್ಲದೆ ರಾಜ್ಯದಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಸುಧಾರಣೆಯನ್ನು ತರುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿದ್ದರು.
ಇದಕ್ಕೆ ಉತ್ತರವಾಗಿ ಶಿಕ್ಷಣ ಸಚಿವ ಬುಖಾರಿ ಅವರು, “ಜನರಲ್ ರಾವತ್ ಗಡಿ ರಕ್ಷಣೆ ಕೆಲಸವನ್ನು ನಿಭಾಯಿಸಿಕೊಂಡಿರುವುದು ಒಳ್ಳೆಯದು; ರಾಜ್ಯ ಸರಕಾರದ ವ್ಯವಹಾರಗಳಲ್ಲಿ ಅವರು ಮೂಗು ತೂರಿಸಕೂಡದು’ ಎಂದು ಖಡಕ್ ಆಗಿ ಹೇಳಿದ್ದರು.
ಬಿಜೆಪಿ ಜಮ್ಮು ಕಾಶ್ಮೀರ ವಕ್ತಾರ ಬ್ರಿಗೇಡಿಯರ್ ಅನಿಲ್ ಗುಪ್ತಾ (ನಿವೃತ್ತ) ಅವರು ಹೇಳಿಕೆಯೊಂದನ್ನು ನೀಡಿ, “ರಾಜ್ಯದ ಶಿಕ್ಷಣ ಸಚಿವರು ಪ್ರಗತಿಪರರಾಗಿರಬೇಕು; ವಸ್ತುಸ್ಥಿತಿಯನ್ನು ಸ್ವೀಕರಿಸಬೇಕ; ಅದು ಬಿಟ್ಟು ಸೇನಾ ಮುಖ್ಯಸ್ಥರೊಂದಿಗೆ ವಾಕ್ ಸಮರಕ್ಕೆ ಇಳಿಯುವುದು ಸರಿಯಲ್ಲ’ ಎಂದು ಹೇಳಿದರು.
ಜನರಲ್ ರಾವತ್ ಅವರ ಅಭಿಪ್ರಾಯಗಳನ್ನು ಧನಾತ್ಮಕವಾಗಿ ಕಾಣಬೇಕೇ ಹೊರತು ಅದನ್ನೊಂದು ರಾಜಕೀಯ ವಿವಾದದ ವಿಷಯವನ್ನಾಗಿ ಕಾಣಬಾರದು’ ಎಂದು ಗುಪ್ತಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್