ಸೋದರ ಸಂಬಂಧಿ ಭ್ರಷ್ಟಾಚಾರ: ಮಮತಾ ರಾಜೀನಾಮೆಗೆ ಬಿಜೆಪಿ ಆಗ್ರಹ
Team Udayavani, Aug 2, 2017, 4:22 PM IST
ಹೊಸದಿಲ್ಲಿ : ಸೋದರ ಸಂಬಂಧಿಯಾಗಿರುವ ತೃಣಮೂಲ ಸಂಸದ ಅಭಿಷೇಕ್ ಬ್ಯಾನರ್ಜಿ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ವಿಷಯದಲ್ಲಿ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶುದ್ಧಹಸ್ತರಾಗಿ ಮೂಡಿ ಬರಬೇಕು ಇಲ್ಲವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು, “ಅಭಿಷೇಕ್ ಬ್ಯಾನರ್ಜಿ ತಾನು ಲೀಪ್ಸ್ ಆ್ಯಂಡ್ ಬೌಂಡ್ಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರಾಗಿದ್ದಾಗ ರಾಜ್ ಕಿಶೋರ್ ಮೋದಿ ಎಂಬ ರಿಯಲ್ ಎಸ್ಟೇಟ್ ಉದ್ಯಮಿಯಿಂದ 1.15 ಕೋಟಿ ರೂ. ಲಂಚ ಪಡೆದಿದ್ದಾರೆ; ರಾಜ್ ಕಿಶೋರ್ ಮೋದಿ ಭೂಕಬಳಿಕೆ ಸಹಿತ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ’ ಎಂದು ಆರೋಪಿಸಿದರು.
“ಆಶ್ಚರ್ಯಕರವೆಂಬಂತೆ ಮಮತಾ ಬ್ಯಾನರ್ಜಿ ಅವರು 2009ರಲ್ಲಿ ಅದೇ ರಾಜ್ ಕಿಶೋರ್ ವಿರುದ್ಧ ರೈತರ ಭೂಕಬಳಿಕೆಯ ಆರೋಪ ಮಾಡಿ ಆತನ ಬಂಧನಕ್ಕೆ ಒತ್ತಾಯಿಸಿದ್ದರು’ ಎಂದು ಜಾವಡೇಕರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kangana Ranaut ಬಳಿ 4.5 ಕೋಟಿ ಮೌಲ್ಯದ 50 ಪಾಲಿಸಿ: ಅಫಿದವಿತ್
ಗ್ರಾಹಕ ರಕ್ಷಣ ಕಾಯ್ದೆ ಅಡಿ ವಕೀಲರು ಬರಲ್ಲ: ಸುಪ್ರೀಂ
Patna; ಸರ್ಕಾರಿ ಗೌರವದೊಂದಿಗೆ ಸುಶೀಲ್ ಮೋದಿ ಅಂತ್ಯ ಸಂಸ್ಕಾರ
Mumbai; ಉದ್ಧವ್ ಬಣದ ಅಭ್ಯರ್ಥಿ ಅನಿಲ್ ದೇಸಾಯಿ ರ್ಯಾಲಿಯಲ್ಲಿ ಇಸ್ಲಾಮಿಕ್ ಧ್ವಜ ಹಾರಾಟ?
Varanasi; 20000 ಕೋಟಿ ರೂ. ವ್ಯಯಿಸಿದರೂ ಗಂಗಾ ನದಿ ಏಕೆ ಶುದ್ಧವಾಗಿಲ್ಲ: ಕಾಂಗ್ರೆಸ್