ಪಟಾಕಿ ಅವಘಡ: ಬೆಂಕಿಯಲ್ಲಿ ಬೆಂದು ಹೋದ ಬಿಜೆಪಿ ಸಂಸದೆಯ ಮೊಮ್ಮಗಳು
ಮನೆಯವರು ಮಗುವನ್ನು ಹುಡುಕುವ ವೇಳೆ ಸುಟ್ಟ ಪರಿಸ್ಥಿತಿಯಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ.
Team Udayavani, Nov 17, 2020, 3:54 PM IST
ಉತ್ತರ ಪ್ರದೇಶ: ಕಳೆದ ರಾತ್ರಿ ದೀಪಾವಳಿ ಹಬ್ಬದ ಸಂಭ್ರಮಾಚರಣೆಯ ನಡುವೆ ಸಂಭವಿಸಿದ ಪಟಾಕಿ ಅವಘಡದಲ್ಲಿ ಪ್ರಯಾಗ್ ರಾಜ್ ಕ್ಷೇತ್ರದ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಅವರ ಮೊಮ್ಮಗಳು ಅಸುನೀಗಿರುವ ಘಟನೆ ನಡೆದಿದೆ.
ಗೆಳೆಯರೊಂದಿಗೆ ಮನೆಯ ಟೆರೆಸ್ನಲ್ಲಿ ಪಟಾಕಿ ಹಚ್ಚುವ ಸಂದರ್ಭದಲ್ಲಿ, ಬಾಲಕಿ ಧರಿಸಿದ್ದ ಬಟ್ಟೆಗೆ ಬೆಂಕಿ ಹಿಡಿದಿದ್ದು, ಈ ಪರಿಣಾಮ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಆರು ವರ್ಷದ ಬಾಲಕಿ ಅಸುನೀಗಿದ್ದಾಳೆ.
ಸುತ್ತಲೂ ಪಟಾಕಿ ಸದ್ದು ಇದ್ದ ಕಾರಣ ಮನೆಯ ಯಾರೊಬ್ಬರಿಗೂ ಮಗುವಿನ ಆಕ್ರಂದನ ಕೇಳಿಸಿರಲಿಲ್ಲ. ನಂತರ ಮನೆಯವರು ಮಗುವನ್ನು ಹುಡುಕುವ ವೇಳೆ ಸುಟ್ಟ ಪರಿಸ್ಥಿತಿಯಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ.
ಬಾಲಕಿಯ ದೇಹದ ಶೇಕಡಾ 60ರಷ್ಟು ಭಾಗ ಬೆಂಕಿಯಲ್ಲಿ ಬೆಂದು ಹೋಗಿತ್ತು. ತೀವ್ರವಾಗಿ ಗಾಯಗೊಂಡ ಬಾಲಕಿಯನ್ನು ಪ್ರಾಥಮಿಕ ಚಿಕಿತ್ಸೆಗಾಗಿ ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಇದನ್ನೂ ಓದಿ :ಮುಂದಿನ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ: ಸಚಿವ ಪ್ರಭು ಚವ್ಹಾಣ
ಬಾಲಕಿಯ ಸ್ಥಿತಿ ಗಂಭೀರವಾದ ಕಾರಣ ಏರ್ ಆಂಬುಲೆನ್ಸ್ ಮೂಲಕ ದೆಹಲಿ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದುರಾದೃಷ್ಟವಶಾತ್ ದಾರಿ ಮಧ್ಯೆ ಬಾಲಕಿ ಕೊನೆಯುಸಿರೆಳೆದಿದ್ದಾಳೆ.
ತನ್ನ ಮೊಮ್ಮೊಗಳ ಚಿಕಿತ್ಸೆಯ ಕುರಿತಾಗಿ ಸಂಸದೆ ರೀಟಾ ಜೋಶಿ ಅವರು ಕೇಂದ್ರ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್, ಆರೋಗ್ಯ ಸಚಿವ ಹರ್ಷವರ್ಧನ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರವರ ಜೊತೆ ಮಾತುಕತೆ ನಡೆಸಿದ್ದರು.