ಅರುಣಾಚಲ ಪ್ರದೇಶ : ಇಬ್ಬರು ಬಿಜೆಪಿ ಶಾಸಕರಿಗೆ ಶೋಕಾಸ್
Team Udayavani, Jan 22, 2018, 4:49 PM IST
ಇಟಾನಗರ : ಅರುಣಾಚಲ ಪ್ರದೇಶ ಬಿಜೆಪಿ ಘಟಕ ತನ್ನಿಬ್ಬರು ಶಾಸಕರಿಗೆ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಶೋಕಾಸ್ ನೊಟೀಸ್ ಜಾರಿ ಮಾಡಿದೆ.
ನಿಮ್ಮ ವಿರುದ್ಧ ಯಾಕೆ ಶಿಸ್ತು ಕ್ರಮವನ್ನು ತೆಗೆದುಕೊಳ್ಳಬಾರದು ಎಂಬುದನ್ನು ವಾರದೊಳಗೆ ತಿಳಿಸಿ ಎಂದು ಶಾಸಕರಾದ ಪಾಣಿ ತರಮ್ ಮತ್ತು ಪಂಗಾ ಬಾಗೆ ಅವರಿಗೆ ಬಿಜೆಪಿ ಶೋಕಾಸ್ ನೊಟೀಸ್ ಜಾರಿ ಮಾಡಿರುವುದಾಗಿ ಪಕ್ಷದ ಪ್ರಕಟನೆ ತಿಳಿಸಿದೆ.