ರೈತನ ಮೇಲೆ ಟ್ರಾಕ್ಟರ್ ಹರಿಸಿ ಕೊಂದ ಲೋನ್ ರಿಕವರಿ ಏಜಂಟ್
Team Udayavani, Jan 22, 2018, 5:04 PM IST
ಹೊಸದಿಲ್ಲಿ : ಸಾಲ ತೀರಿಸದೆ ಬಾಕಿ ಇಟ್ಟಿದ್ದ ರೈತನೋರ್ವನ ಟ್ರ್ಯಾಕ್ಟರನ್ನು ಲೋನ್ ರಿಕವರಿ ಏಜಂಟರುಗಳು ವಶಪಡಿಸಿಕೊಂಡು ಆತನ ಮೇಲೆಯೇ ಆ ಟ್ರ್ಯಾಕ್ಟರನ್ನು ಹರಿಸಿ ಕೊಂದಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ.
ಟ್ರ್ಯಾಕ್ಟರ್ ಹರಿಸುವ ಮೂಲಕ ಕೊಲೆಯಾಗಿರುವ ರೈತನನ್ನು 45ರ ಹರೆಯದ ಜ್ಞಾನಚಂದ್ರ ಎಂದು ಗುರುತಿಸಲಾಗಿದೆ. ಸಾಲ ವಸೂಲಾತಿಗೆ ಬಂದಿದ್ದ ಏಜಂಟರೊಂದಿಗೆ ಆತ ವಾದಕ್ಕೆ ಇಳಿದಾಗ ಕೋಪೋದ್ರಿಕ್ತರಾದ ಅವರು ಆತನ ಟ್ರಾಕ್ಟರನ್ನು ವಶಪಡಿಸಿಕೊಂಡು ಆತನ ಮೇಲೆಯೇ ಅದನ್ನು ಹರಿಸಿ ಆತನನ್ನು ನಿಷ್ಕರುಣೆಯಿಂದ ಸಾಯಿಸಿದರು.
ಟ್ರಾಕ್ಟರ್ ಕೊಳ್ಳಲು ರೈತ ಜ್ಞಾನಚಂದ್ರ 99,000 ರೂ. ಸಾಲ ಪಡೆದಿದ್ದ. ಈ ಪೈಕಿ 90,000 ರೂ. ಅಸಲು ಮತ್ತು ಅದರ ಮೇಲಿನ ಬಡ್ಡಿಯನ್ನು ಆತ ಪಾವತಿಸಿರಲಿಲ್ಲ ಎಂದು ಹಿಂದಿ ದೈನಿಕ “ಪತ್ರಿಕಾ’ ವರದಿ ತಿಳಿಸಿವೆ.