ಬೆಳೆಯದ ಬಾಂಧವ್ಯ: ದತ್ತು ಪ್ರಕ್ರಿಯೆ ರದ್ದುಗೊಳಿಸಿದ ಹೈಕೋರ್ಟ್
Team Udayavani, Feb 6, 2024, 5:55 AM IST
ಮುಂಬಯಿ: ಮಗುವಿನೊಂದಿಗೆ ಬಾಂಧ ವ್ಯ ಬೆಳೆಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪೋಷಕರು ಅವಲತ್ತುಕೊಂಡ ಹಿನ್ನೆಲೆಯಲ್ಲಿ ಗಂಡು ಮಗುವೊಂದರ ದತ್ತು ಪ್ರಕ್ರಿಯೆಯನ್ನೇ ಬಾಂಬೆ ಹೈಕೋ ರ್ಟ್ ರದ್ದುಗೊಳಿಸಿದೆ.
ಕಾನೂನಿನ ಪ್ರಕಾರವೇ ದಂಪತಿಯು ಗಂಡು ಮಗುವೊಂದನ್ನು ದತ್ತು ಪಡೆದಿ ದ್ದರು. ಅದಕ್ಕೂ ಮುನ್ನವೇ ಆ ದಂಪತಿಗೆ ಹೆಣ್ಣು ಮಗುವೊಂದಿತ್ತು. ನಂತರ, ಕೋರ್ಟ್ ಮೆಟ್ಟಿಲೇರಿದ ದಂಪತಿ, “ತಾವು ದತ್ತು ಪಡೆದಿರುವ ಬಾಲಕನ ಹವ್ಯಾಸಗಳು ಮತ್ತು ಕೆಟ್ಟ ನಡವಳಿಕೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ, ಬಾಲ ಕನು ನಮ್ಮೊಂದಿಗಾಗಲೀ, ನಮ್ಮ ಮಗಳೊಂದಿಗಾಗಲೀ ಉತ್ತಮ ಬಾಂಧವ್ಯವನ್ನು ಹೊಂದಿಲ್ಲ. ಹಾಗಾಗಿ, ನಾವು ಮಗುವನ್ನು ವಾಪಸ್ ನೀಡಲು ಬಯಸುತ್ತೇವೆ’ ಎಂದು ಹೇಳಿದ್ದರು.
ಅರ್ಜಿ ವಿಚಾರಣೆ ನಡೆಸಿದ ಪೀಠ, ಪೋಷಕರ ಕೋರಿಕೆಗೆ ಒಪ್ಪಿ ದತ್ತು ಪ್ರಕ್ರಿಯೆ ಯನ್ನು ರದ್ದುಪಡಿಸಿ, ಅವರು ಮಗುವಿನ ಹೆಸರಲ್ಲಿ ಮಾಡಿದ್ದ 2 ಲಕ್ಷ ರೂ. ಠೇವಣಿ ವಾಪಸ್ ನೀಡುವಂತೆ ಸೂಚಿಸಿದೆ. ಜತೆಗೆ, ಮಗುವನ್ನು “ದತ್ತು ಪಡೆಯಲು ಮುಕ್ತ’ ಎಂದು ಮರು ನೋಂದಣಿ ಮಾಡಿಕೊಳ್ಳುವಂತೆ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ