ಕಸ್ಟಮ್ಸ್ ಹಿರಿಯ ಅಧಿಕಾರಿಯ ಕಾರು ಹರಿದು ಓರ್ವ ಪಾದಚಾರಿ ಸಾವು
Team Udayavani, Feb 21, 2018, 5:03 PM IST
ಮುಂಬಯಿ : ಮುಂಬಯಿ ಹೊರವಲಯದ ಮನ್ ಖುರ್ಡ್ ನಲ್ಲಿ ಹಿರಿಯ ಕಸ್ಟಮ್ಸ್ ಅಧಿಕಾರಿಯೊಬ್ಬರು ಚಲಾಯಿಸುತ್ತಿದ್ದ ಕಾರು ಇಬ್ಬರು ಪಾದಚಾರಿಗಳ ಮೇಲೆ ಹರಿದು ಅವರಲ್ಲಿ ಒಬ್ಟಾತನು ಸಾವಿಗೀಡಾದ ದುರ್ಘಟನೆ ವರದಿಯಾಗಿದೆ.
ಈ ಘಟನೆಯನ್ನು ಅನುಸರಿಸಿ ಕಸ್ಟಮ್ಸ್ ನ ಅಡಿಶನಲ್ ಕಮಿಷನರ್ ಶಕ್ತಿವೇಲು ರಾಜು ಎಂಬವರನ್ನು ಪೊಲೀಸರು ಬಂಧಿಸಿರುವುದಾಗಿ ಮನ್ ಖುರ್ಡ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಸಂಜಯ್ ವೆರ್ಣೇಕರ್ ತಿಳಿಸಿದ್ದಾರೆ.
ಬೆಳಗ್ಗೆ ವಾಕಿಂಗ್ಗೆ ಹೋಗಿದ್ದ ಪಾಂಡುರಂಗ ಪೋಖರೆ 40 ಮತ್ತು ಅಶೋಕ್ ಭಂಡಾರಿ ಅವರ ಮೇಲೆ ರಾಜು ಅವರ ಕಾರು ಹರಿದಿತ್ತು. ಪೋಖರೆ ಸ್ಥಳದಲ್ಲೇ ಸಾವಪ್ಪಿದರೆ ಭಂಡಾರಿ ಗಂಭೀರವಾಗಿ ಗಾಯಗೊಂಡು ಸಮೀಪದ ಆಸ್ಪತ್ರೆಗೆ ದಾಖಲಾಗಿದ್ದಾರೆ.