Cash-for-query; ಮೊಯಿತ್ರಾ ಮನವಿ ತಿರಸ್ಕಾರ:ನ.2 ರಂದು ಹಾಜರಾಗಿ ಎಂದ ನೈತಿಕ ಸಮಿತಿ
Team Udayavani, Oct 28, 2023, 5:13 PM IST
ಹೊಸದಿಲ್ಲಿ: ‘ಪ್ರಶ್ನೆಗಾಗಿ ನಗದು’ಆರೋಪಕ್ಕೆ ಸಂಬಂಧಿಸಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಮನವಿಯನ್ನು ಲೋಕಸಭೆಯ ನೈತಿಕ ಸಮಿತಿ ಶನಿವಾರ ತಿರಸ್ಕರಿಸಿದೆ. ನವೆಂಬರ್ 2 ರಂದು ಮೌಖಿಕ ಸಾಕ್ಷ್ಯಕ್ಕಾಗಿ ತನ್ನ ಮುಂದೆ ಹಾಜರಾಗುವಂತೆ ಸಮಿತಿಯು ಸೂಚಿಸಿದ್ದರಿಂದ ಎರಡು ದಿನಗಳ ವಿಸ್ತರಣೆಗೆ ಅವಕಾಶ ನೀಡಿ ನ 5 ರ ನಂತರ ತನ್ನನ್ನು ಕರೆಯುವಂತೆ ಸಂಸದೆ ಮನವಿ ಮಾಡಿದ್ದರು.
ಬಿಜೆಪಿ ಸಂಸದ ವಿನೋದ್ ಕುಮಾರ್ ಸೋಂಕರ್ ನೇತೃತ್ವದ ಸಮಿತಿ, ಯಾವುದೇ ಕಾರಣಕ್ಕೂ ವಿಸ್ತರಣೆಗಾಗಿ ಯಾವುದೇ ಹೆಚ್ಚಿನ ವಿನಂತಿಯನ್ನು ಪರಿಗಣಿಸುವುದಿಲ್ಲ ಎಂದು ಮೊಯಿತ್ರಾಗೆ ತಿಳಿಸಿದೆ. ವಿಷಯದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಸಂಸತ್ತಿನ ಘನತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ತನ್ನ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸುತ್ತಿರುವ ಸಮಿತಿಗೆ ಶುಕ್ರವಾರ ಪತ್ರ ಬರೆದಿದ್ದ ಮೊಯಿತ್ರಾ , ನಿಗದಿಯಂತೆ ಅಕ್ಟೋಬರ್ 31 ರಂದು ಹಾಜರಾಗಲು ಅಸಮರ್ಥತೆಯನ್ನು ವ್ಯಕ್ತಪಡಿಸಿ ನವೆಂಬರ್ 5 ರ ನಂತರ ಮಾತ್ರ ನಾನು ಲಭ್ಯವಿದ್ದೇನೆ ಎಂದು ಹೇಳಿದ್ದರು.
‘ಸಮಿತಿಯ ಮುಂದೆ ಹಾಜರಾಗಲು ದಿನಾಂಕವನ್ನು ವಿಸ್ತರಿಸಲು ನಿಮ್ಮ ಕೋರಿಕೆಯನ್ನು ನೈತಿಕ ಸಮಿತಿಯು ಒಪ್ಪಿಕೊಂಡಿದೆ, ಅಂದರೆ, ಸಮಿತಿಯ ಸಭೆಯನ್ನು ಮರು-ನಿಗದಿಪಡಿಸುವುದು. ಅದರ ಪ್ರಕಾರ, ಮೇಲಿನ ವಿಷಯದಲ್ಲಿ ನೀವು ವೈಯಕ್ತಿಕವಾಗಿ ನವೆಂಬರ್ 2 ರಂದು ಹಾಜರಿರಬೇಕೆಂದು ನಿರ್ಧರಿಸಲಾಗಿದೆ” ಎಂದು ಲೋಕಸಭೆಯ ಸಚಿವಾಲಯ ಶನಿವಾರ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ