ಇಂದು ಸಿಬಿಐನಿಂದ ಚಿದು ಪುತ್ರನ ವಿಚಾರಣೆ
Team Udayavani, Sep 14, 2017, 7:50 AM IST
ನವದೆಹಲಿ: ಏರ್ಸೆಲ್ ಮ್ಯಾಕ್ಸಿಸ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕಾರ್ತಿ ಚಿದಂಬರಂಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ. ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. 2006ರಲ್ಲಿ ನಡೆದ ಡೀಲ್ಗೆ ಸಂಬಂಧಿಸಿದಂತೆ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ (ಎಫ್ಐಪಿಬಿ)ಯಿಂದ ಅನುಮತಿ ಪಡೆಯದೆ 800 ಮಿಲಿಯನ್ ಡಾಲರ್ ಮೊತ್ತದ ಹೂಡಿಕೆಗೆ ಅನುಮೋದನೆ ಪಡೆಯಲಾಗಿತ್ತು ಎಂದು ಆರೋಪಿಸಲಾಗಿತ್ತು. ಇಲ್ಲಿ ಮಾಜಿ ಸಚಿವರ ಪುತ್ರ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗಿದೆ. ಬಿಜೆಪಿ ನಾಯಕ ಡಾ.ಸುಬ್ರಮಣಿ ಯನ್ ಸ್ವಾಮಿ ಆರ್ಥಿಕ ವ್ಯವಹಾರಗಳಿಗಾಗಿನ ಸಂಪುಟ ಸಮಿತಿ ಗಮನಕ್ಕೆ ತಾರದೆ ಅದಕ್ಕೆ ಒಪ್ಪಿಗೆ ಕೊಡಲಾಗಿತ್ತು ಎಂದು ದೂರಿದ್ದರು.