RBI ಗವರ್ನರ್ಗೆ ಸಿಐಸಿ ನೋಟಿಸ್
Team Udayavani, Nov 5, 2018, 7:00 AM IST
ಹೊಸದಿಲ್ಲಿ: ಉದ್ದೇಶಪೂರ್ವಕ ಸುಸ್ತಿದಾರರ ವಿವರ ಬಹಿರಂಗಗೊಳಿಸಲು ಸುಪ್ರೀಂಕೋರ್ಟ್ ಆದೇಶಿಸಿದ್ದರೂ ಅದನ್ನು ಅನುಸರಿಸದ ಹಿನ್ನೆಲೆಯಲ್ಲಿ RBI ಗವರ್ನರ್ ಊರ್ಜಿತ್ ಪಟೇಲ್ಗೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಅಷ್ಟೇ ಅಲ್ಲದೆ, RBI ನಿವೃತ್ತ ಗವರ್ನರ್ ರಘುರಾಂ ರಾಜನ್ ಅವರು ಅನುತ್ಪಾದಕ ಸಾಲಕ್ಕೆ ಸಂಬಂಧಿಸಿ ಬರೆದಿರುವ ಪತ್ರವನ್ನು ಬಹಿರಂಗಗೊಳಿಸುವಂತೆಯೂ ಪ್ರಧಾನಿ ಕಾರ್ಯಾಲಯ, ಹಣಕಾಸು ಸಚಿವಾಲಯ ಮತ್ತು RBIಗೆ ಸಿಐಸಿ ಸೂಚಿಸಿದೆ. ಸುಪ್ರೀಂ ಆದೇಶ ಪಾಲಿಸದ್ದಕ್ಕೆ ನಿಮಗೆ ಗರಿಷ್ಠ ದಂಡವನ್ನೇಕೆ ವಿಧಿಸಬಾರದು ಎಂದು ಪಟೇಲ್ರನ್ನು ಸಿಐಸಿ ಪ್ರಶ್ನಿಸಿದೆ.