ಸಿಎಂ ಮೆಹಬೂಬಾಗೆ ಕರೆ: 130 ತಮಿಳರ ಸುರಕ್ಷಿತ ವಾಪಸಾತಿಗೆ ನೆರವಾಗಿ
Team Udayavani, May 8, 2018, 5:12 PM IST
ಚೆನ್ನೈ : ಜಮ್ಮು ಕಾಶ್ಮೀರದಲ್ಲಿ ಪ್ರತಿಭಟನಕಾರರ ಕಲ್ಲೆಸೆತಕ್ಕೆ ಗುರಿಯಾಗಿ 22ರ ಹರೆಯದ ತಮಿಳು ನಾಡಿನ ಪ್ರವಾಸಿಗನೋರ್ವ ಮೃತಪಟ್ಟಿರುವುದನ್ನು ಅನುಸರಿಸಿ, ಕಾಶ್ಮೀರದಲ್ಲಿ ಈಗ ಉಳಿದಿರುವ ಇತರ 130 ಪ್ರವಾಸಿಗರ ಸುರಕ್ಷಿತ ಮರಳುವಿಕೆಗೆ ನೆರವಾಗುವಂತೆ ತಮಿಳು ನಾಡಿನ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರನ್ನು ಒತ್ತಾಯಿಸಿದ್ದಾರೆ.
ಶ್ರೀನಗರದ ಹೊರವಲಯದಲ್ಲಿನ ನರಬಲ್ ಸಮೀಪ ಪ್ರತಿಭಟನಕಾರರು ನಡೆಸಿದ ಕಲ್ಲೆಸೆತದಲ್ಲಿ ಚೆನ್ನೈ ನಿವಾಸಿ ಆರ್ ತಿರುಮಣಿಸೆಲ್ವಂ ಎಂಬವರು ತಲೆಗೆ ಗಂಭೀರವಾಗಿ ಗಾಯಗೊಂಡು ಅನಂತರ ಮೃತಪಟ್ಟಿದ್ದರು.
ಜಮ್ಮು ಕಾಶ್ಮೀರದಲ್ಲಿ ಪ್ರಕೃತ ಪ್ರವಾಸಾರ್ಥವಾಗಿ ಉಳಿದಿರುವ ಇನ್ನೂ ಸುಮಾರು 130 ಮಂದಿ ತಮಿಳು ಪ್ರವಾಸಿಗರ ಸುರಕ್ಷಿತ ಮರಳುವಿಕೆಗೆ ನೆರವಾಗುವಂತೆ ತಾನು ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಸಿಎಂ ಪಳನಿಸ್ವಾಮಿ ಅವರು ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು