ಆರ್ಥಿಕ ಸ್ವಾಯತ್ತೆ ಕೊಟ್ಟರೆ ವಿಶೇಷ ಸ್ಥಾನಮಾನ ಬೇಡ: ಸಿಎಂ ಪಟ್ನಾಯಕ್
Team Udayavani, Dec 26, 2018, 5:04 PM IST
ಭುವನೇಶ್ವರ : ಒಡಿಶಾ ರಾಜ್ಯಕ್ಕೆ ಆರ್ಥಿಕ ಸ್ವಾಯತ್ತೆ ಬೇಕೆಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಆಗ್ರಹಿಸಿದ್ದಾರೆ.
ಆರ್ಥಿಕ ಸ್ವಾಯತ್ತೆ ಸಿಕ್ಕಿದರೆ ರಾಜ್ಯಕ್ಕೆ ವಿಶೇಷ ವರ್ಗದ ಸ್ಥಾನಮಾನ ಬೇಕಾಗಿರುವುದಿಲ್ಲ, ಮಾತ್ರವಲ್ಲ ಕೇಂದ್ರದ ಯಾವುದೇ ಅನುದಾನವೂ ಬೇಕಾಗಿರುವುದಿಲ್ಲ ಎಂದವರು ಹೇಳಿದ್ದಾರೆ.
ಆರ್ಥಿಕ ಸ್ವಾಯತ್ತೆಯಿಂದ ರಾಜ್ಯ ಅಭಿವೃದ್ಧಿ ಸುಲಭವಾಗುತ್ತದೆ. ತನ್ನದೇ ಹಣಕಾಸು ಬಲದ ಮೇಲೆ ಸಮೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ. ಈ ಹಿಂದೆ 1990 ದಶಕದಲ್ಲೇ ಒಡಿಶಾ ದ ಹಿರಿಯ ನಾಯಕ ಬಿಜು ಪಟ್ನಾಯಕ್ ಅವರು ಈ ಬಗೆಯ ಆರ್ಥಿಕ ಸ್ವಾಯತ್ತೆಗೆ ಮನವಿ ಮಾಡಿದ್ದರು ಎಂದು ನವೀನ್ ಪಟ್ನಾಯಕ್ ಹೇಳಿದರು.
ಅವರು ಬಿಜು ಜನತಾ ದಳ (ಬಿಜೆಡಿ) ಪಕ್ಷದ 21ನೇ ಸ್ಥಾಪನಾ ದಿನದ ಸಂದರ್ಭದಲ್ಲಿ ಇಂದಿಲ್ಲಿ ಮಾತನಾಡುತ್ತಿದ್ದರು. ಆದರೆ ತಾವು ಬಯಸುವ ಆರ್ಥಿಕ ಸ್ವಾಯತ್ತೆ ಸ್ವರೂಪ, ಗುಣ ಲಕ್ಷಣ ಇತ್ಯಾದಿಗಳ ವಿವರವನ್ನು ನವೀನ್ ಪಟ್ನಾಯಕ್ ನೀಡಲಿಲ್ಲ.
ಒಡಿಶಾ 14ನೇ ಹಣಕಾಸು ಆಯೋಗದಿಂದ 4.59 ಲಕ್ಷ ಕೋಟಿ ರೂ. ಕೇಳಿತ್ತು. ಆದರೆ ಅದು ಕೇವಲ 1.84 ಲಕ್ಷ ಕೋಟಿ ಕೊಟ್ಟಿತು. 2015-20ರ ಸಾಲಿನ ಕೇಂದ್ರ ತೆರಿಗೆಗಳು ಮತ್ತು ಸುಂಕದಲ್ಲಿನ ರಾಜ್ಯದ ಪಾಲು ಇದಾಗಿತ್ತು.
ಕೇಂದ್ರ ಸರಕಾರ ಎಲ್ಲ ರಂಗಗಳಲ್ಲೂ ಒಡಿಶಾ ವನ್ನು ನಿರ್ಲಕ್ಷಿಸುತ್ತಿದೆ ಎಂದು ನವೀನ್ ಪಟ್ನಾಯಕ್ ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ