ಪ್ರಜಾಪ್ರಭುತ್ವ ಅಪಾಯದಲ್ಲಿ: ಗೋವಾ ಬಿಷಪ್ ವಿವಾದ
Team Udayavani, Jun 6, 2018, 3:40 AM IST
ಹೊಸದಿಲ್ಲಿ: ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬಂಥ ದಿಲ್ಲಿ ಆರ್ಚ್ ಬಿಷಪ್ ಹೇಳಿಕೆ ವಿವಾದಕ್ಕೆ ಎಡೆ ಮಾಡಿದ ಬೆನ್ನಲ್ಲೇ ಗೋವಾ ಆರ್ಚ್ ಬಿಷಪ್ ಫಾದರ್ ಫಿಲಿಪ್ ನೆರಿ ಅಂಥದ್ದೇ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ದೇಶದಲ್ಲಿ ಹೊಸ ಧೋರಣೆಯೊಂದು ಆರಂಭವಾಗಿದೆ. ಎಲ್ಲರೂ ಒಂದೇ ರೀತಿ ಬಟ್ಟೆ ತೊಡಬೇಕು, ಆಹಾರ ಸೇವಿಸಬೇಕು, ಆಚರಣೆ ಮಾಡಬೇಕು ಎನ್ನಲಾಗುತ್ತದೆ. ಏಕಸಂಸ್ಕೃತಿ ಹೇರುವುದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಸಂವಿಧಾನ ಅಪಾಯದಲ್ಲಿದೆೆ ಎಂದು ಅವರು ಪತ್ರದ ಮುಖೇನ ಗೋವಾ, ದಾಮನ್ ಆರ್ಚ್ಡಯಾಸಿಸ್ಗೆ ತಿಳಿಸಿದ್ದಾರೆ. ಈ ಹೇಳಿಕೆ ವಿವಾದವಾಗುತ್ತಿದ್ದಂತೆ, ಅವರು ಯಾವುದೇ ಪಕ್ಷವನ್ನು ಉದ್ದೇಶಿಸಿ ಹೇಳಿಕೆ ನೀಡಿಲ್ಲ ಎಂದು ಅವರ ಕಚೇರಿ ಸ್ಪಷ್ಟಪಡಿಸಿದೆ. ಇನ್ನೊಂದೆಡೆ, ಕೇಂದ್ರ ಸಚಿವ ಎಂ.ಎ.ನಖ್ವಿ, ದೇಶದಲ್ಲಿ ಅಲ್ಪಸಂಖ್ಯಾಕರು ಸುರಕ್ಷಿತವಾಗಿದ್ದಾರೆ ಎಂದಿದ್ದಾರೆ.