ಸಿಪಿಎಂ ರಾಜ್ಯಸಭಾ ಸದಸ್ಯ ಋತಬೃತ ಬ್ಯಾನರ್ಜಿ ಉಚ್ಚಾಟನೆ
Team Udayavani, Sep 14, 2017, 11:38 AM IST
ಕೋಲ್ಕತ : ವಿವಾದಾತ್ಮಕ ಸಿಪಿಎಂ ರಾಜ್ಯಸಭಾ ಸದಸ್ಯ ಋತಬೃತ ಬ್ಯಾನರ್ಜಿ ಅವರನ್ನು ಶಿಸ್ತು ಕ್ರಮದ ಅಂಗವಾಗಿ ಪಕ್ಷದಿಂದ ಉಚ್ಚಾಟಿಸಲಾಗಿದೆ.
ಋತಬೃತ ಅವರು “ಪಾಲಿಟ್ಬ್ಯೂರೋ ಮುಸ್ಲಿಮರಿಗೆ ಒಂದು ಕೋಟಾ ಹೊಂದಿದೆ’ ಎಂದು ಟೀಕಿಸಿದ್ದರಲ್ಲದೆ ಕೇಂದ್ರ ನಾಯಕತ್ವವು ಬೆಂಗಾಲಿ ವಿರೋಧಿ ಎಂದು ಆರೋಪಿಸಿದ್ದರು.
ಪಕ್ಷದ ಪ್ರಧಾನ ಕಾರ್ಯಾಲಯದಲ್ಲಿನ ಸಭೆಯ ಬಳಿಕ ಪಶ್ಚಿಮ ಬಂಗಾಲ ರಾಜ್ಯ ಸಮಿತಿಯು ಕೇಂದ್ರ ಸಮಿತಿಗೆ ಪತ್ರವನ್ನು ಬರೆದು ಬ್ಯಾನರ್ಜಿ ಅವರ ಉಚ್ಚಾಟನೆಗೆ ಅನುಮೋದನೆಯನ್ನು ಕೋರಿತು.
ಬ್ಯಾನರ್ಜಿ ಅವರು ಸಿಪಿಎಂ ಪಕ್ಷದ ಹಾಲಿ ರಾಜ್ಯಸಭಾ ಸದಸ್ಯರಾಗಿರುವುದರಿಂದ ಅವರ ಉಚ್ಚಾಟನೆಗೆ ನಿಯಮಾನುಸಾರ ಕೇಂದ್ರ ಸಮಿತಿಯ ಅನುಮೋದನೆ ಪಡೆಯುವ ಅಗತ್ಯವಿದೆ.